Published On: Sun, Jan 26th, 2025

ಬಂಟ್ವಾಳದಲ್ಲಿ ಶ್ರೀ ಕಾಶೀ ಮಠಾಧೀಶರಿಂದ ಗಂಗಾರತಿ

ಬಂಟ್ವಾಳ: ಇಲ್ಲಿನ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ನೇತ್ರಾವತಿ ನದಿ ತೀರದಲ್ಲಿ ಶನಿವಾರ ರಾತ್ರಿ ಸುಮಂಗಳೆಯರಿಂದ ಸಾಮೂಹಿಕ ವಿಷ್ಣು- ಸಹಸ್ರನಾಮ ಪಠಣ, ಕುಂಕುಮಾರ್ಚನೆ ಮತ್ತು ಗಂಗಾರತಿ ನೆರವೇರಿತು.


ಶ್ರೀ ಕಾಶೀಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮಿಜಿಯವರುನೇತ್ರಾವತಿ ನದಿಗೆ ಗಂಗಾರತಿ ನೆರವೇರಿಸಿ ಆಶೀರ್ವಚನ ನೀಡಿದರು.


ಶ್ರೀಗಳು ಪುಂಜಾಲಕಟ್ಟೆಯಿಂದ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ  ಶ್ರೀ ದೇವಳಕ್ಕೆ ಭೇಟಿ ನೀಡಿ ಸಾಮೂಹಿಕ ವಿಷ್ಣು- ಸಹಸ್ರನಾಮ ಪಠಣ, ಕುಂಕುಮಾರ್ಚನೆ ಮತ್ತು ಗಂಗಾರತಿಯಲ್ಲಿ‌ಪಾಲ್ಗೊಂಡರು.ಅದೇರೀತಿ ಬಂಟ್ವಾಳ ಶ್ರೀಕಾಶೀಮಠಕ್ಕು ಚಿತ್ತೈಸಿದರು.ಈ ಸಂದರ್ಭ ದೇವಳದ ಆಡಳಿತಮೊಕ್ತೇಸರರು,ಮೊಕ್ತೇಸರರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter