ವಿಟ್ಲ: ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಾದಕಟ್ಟೆ ಇದರ ವಾರ್ಷಿಕ ಜಾತ್ರಾ ಮಹೋತ್ಸವ, 108 ಕಾಯಿ ಗಣಪತಿ ಹವನ ಹಾಗೂ ಧೂಮಾವತಿ ಬಂಟ ದೈವಗಳ ನೇಮೋತ್ಸವ ವಿಜ್ರಂಭಣೆಯಿಂದ ಜರುಗಿತು.
ಶ್ರೀ ದೇವರಿಗೆ ಕಲಶಪೂಜೆ, 108 ಕಾಯಿ ಗಣಪತಿ ಹವನ, ಹರಿಕೆ ಸಾಮಾಗ್ರಿಗಳ ಅರ್ಪಣೆ, ತುಲಾಭಾರ ಸೇವೆ, ಮಹಾಪೂಜೆ, ಶ್ರೀ ದೇವರ ಬಲಿ, ಕಟ್ಟೆಪೂಜೆ ಸುಡುಮದ್ದು ಪ್ರದರ್ಶನ, ದರ್ಶನ ಬಲಿ, ಬಟ್ಟಲು ಕಾಣಿಕೆ, ಅನ್ನಸಂತರ್ಪಣೆ ಹಾಗೂ ನೇಮೋತ್ಸವ ಗಳು ನಡೆದವು.
ಈ ಸಂದರ್ಭ “ಕರ್ಣ ಭೇದನ” ಯಕ್ಷಗಾನ-ತಾಳಮದ್ದಳೆ ಹಾಗೂ ನೂತನವಾಗಿ ನಿರ್ಮಿಸಿದ ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟನೆ ನೆರವೇರಿತು.

