ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದ ಸಂದರ್ಭ ಬಂಟ್ವಾಳ ಸುರೇಶ್ ಬಾಳಿಗ ಮತ್ತು ಮನೆಯವರು ಪೊಳಲಿ ಶ್ರೀ ದುರ್ಗಾಪರಮೇಶ್ವರೀ ದೇವಿಗೆ ಬೆಳ್ಳಿಯ ಕೊಡ ಸೇವಾರೂಪವಾಗಿ ಅರ್ಪಿಸಿದರು.
ದೇವಳದ ಪವಿತ್ರಪಾಣಿ ಅನುವಂಶಿಕ ಮೊಕ್ತೇಸರ ಮಾಧವ ಭಟ್, ಅರ್ಚಕರಾದ ನಾರಾಯಣ ಭಟ್, ಪರಮೇಶ್ವರ ಭಟ್, ಕೆ.ರಾಮ್ ಭಟ್ ದೇವಳದ ಮೊಕ್ತೇಸರ ಚೇರ ಸೂರ್ಯನಾರಾಯಣ ರಾವ್, ಧಾರ್ಮಿಕ ಪರಿಷತ್ ಸದಸ್ಯ ಪೊಳಲಿ ಗಿರಿಪ್ರಕಾಶ್ ತಂತ್ರಿ ,ಉಳಿಪಾಡಿಗುತ್ತು ಅರುಣ್ ಆಳ್ವ, ಅಮ್ಮುಂಜೆಗುತ್ತು ಕೃಷ್ಣಕುಮಾರ್ ಪೂಂಜ ಹಾಗೂ ಅರ್ಚಕವೃಂದದವರು ಭಕ್ತಾಧಿಗಳು ಇದ್ದರು.

