ಬಂಟ್ವಾಳ :ಚಿಣ್ಣರಲೋಕದ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ ಇದರ ವತಿಯಿಂದ ಬಿ.ಸಿ.ರೋಡ್ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಫೆ.೧೧ರಿಂದ ಕೃಷಿ ಉತ್ಸವ ಮತ್ತು ಕಲೋತ್ಸವ ಕಾರ್ಯಕ್ರಮ ನಡೆಯಲಿರುವ ಹಿನ್ನಲೆಯಲ್ಲಿ ಭೂಮಿ ಪೂಜೆ ಕಾರ್ಯಕ್ರಮ ಗುರುವಾರ ನಡೆಯಿತು.

ಕೃಷಿ ಉತ್ಸವ ಮತ್ತು ಕಲೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್, ಸ್ಥಳದಾನಿ ಅಜಿತ್ ಕುಮಾರ್ ಬರಿಮಾರ್, ಚಿಣ್ಣರ ಲೋಕದ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಸಂಚಾಲಕ ಮೋಹನಾದಾಸ್ ಕೊಟ್ಟಾರಿ, ಸಮಿತಿಯ ಪ್ರಮುಖರಾದ ಸರಪಾಡಿ ಅಶೋಕ ಶೆಟ್ಟಿ , ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಪ್ರಕಾಶ್ ಬಿ.ಶೆಟ್ಟಿ ಶ್ರೀ ಶೈಲ, ಸೀತಾರಾಮ ಶೆಟ್ಟಿ ಕಾಂತಾಡಿ ಗುತ್ತು, ದೇವಪ್ಪ ಕುಲಾಲ್ ಪಂಜಿಕಲ್ಲು, ಮಹಮ್ಮದ್ ನಂದಾವರ,ಜೆನಿತ್, ಸತೀಶ್ ಕುಮಾರ್, ಸೌಮ್ಯಾ ಯಶವಂತ್,ವಿಜಯಲಕ್ಷ್ಮಿ, ಮಲ್ಲಿಕಾ, ರಂಗ ಕಲಾವಿದ ಎಚ್.ಕೆ. ನಯನಾಡು, ರತ್ನದೇವ್ ಪುಂಜಾಲಕಟ್ಟೆ, ಶಿವಪ್ರಸಾದ್ ಕೊಟ್ಟಾರಿ, ಗಣೇಶ್ ನಾಯಕ್ ಬಿಲ್ಲಾಡಿ, ಸಭಾಂಗಣ ನಿರ್ವಹಣೆಯ ರಮಾನಾಥ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
