ಮುಂಬಯಿ: (ಆರ್ಬಿಐ),ಜ.೨೭:ಮುAಬಯಿ ಕನ್ನಡ ಸಂಘಇದರಮಹಿಳಾವಿಭಾಗಧ್ಯಕ್ಷೆ, ಮಹಾನಗರ ಮುಲುಂಡ್ ಪ್ರದೇಶದ ಹೆಸರಾಂತ ಸಮಾಜ ಸೇವಕಿ ಡಾ| ರಜನಿ ವಿನಾಯಕ್ ಪೈ ಅವರು ಭಾರತ ರಾಷ್ಟçದ ೭೨ನೇ ಗಣರಾಜ್ಯೋತ್ಸವದ ಪ್ರಯುಕ್ತ ಉಪನಗರದ ಥಾಣೆ ಜಿಲ್ಲೆಯ ಭಿವಂಡಿ ಇಲ್ಲಿನ ಬಾಲಾಪರಾಧಿ ಗೃಹಕ್ಕೆ ಭೇಟಿ ನೀಡಿ ಮಕ್ಕಳ ಭವಿಷ್ಯ ಸುಧಾರಣೆಗಳ ಬಗ್ಗೆ ಮಕ್ಕಳಿಗೆ ಆರೈಕೆ ಮಾಡುವಂತೆ ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ ಮಕ್ಕಳಿಗಾಗಿ ವೈಯಕ್ತಿಕ ಹೈಜೆನಿಕ್ ಕಿಟ್ಟ್ವಿತರಣೆ ಮಾಡಿ ಶೀಘ್ರವೇ
ಮಹಾಮಾರಿ ಕರೋನಾ ಮುಕ್ತಗೊಂಡು ರಾಷ್ಟçದ ಭಾವೀ ಪ್ರಜೆಗಳಾದ ಮಕ್ಕಳಿಗೆ ಶುಭ ಕೋರಿದರು.

ಈ ಸಂದರ್ಭದಲ್ಲಿಥಾಣೆ ಜಿಲ್ಲೆಯ ಮಾನದ್ ಸಂಸ್ಥೆಯ ಸಚಿವ ದಿಲೀಪ್ ಕಲಂತ್ರಿ, ಭಿವಂಡಿ ಸುವಿಧಾ ಮಂಚ್ ಸ್ಥಾಪಕ ಅಧ್ಯಕ್ಷಪೂನಂಚAದ್ ಗುಪ್ತಾ, ಜಿಲ್ಲೆಯ ಉಪವಿಭಾಗದ ಮ್ಯಾಜಿಸ್ಟೆçÃಟ್ ಡಾ| ಮೋಹನ್ನಲಡ್ಕರ್ ಮತ್ತು ಇತ್ತಿತರ ಗಣ್ಯರು ಉಪಸ್ಥಿತರಿದ್ದರು.

ಈ ವರ್ಷದ ಆದಿಯಲ್ಲಿ ಭಾರತ ರಾಷ್ಟçದಾದ್ಯಂತ ಹಬ್ಬಿದ್ದ ನೋವೆಲ್ ಕರೋನಾ (ಕೋವಿಡ್-೧೯) ಸಾಂಕ್ರಮಿಕ ರೋಗದ ವಿರುದ್ಧ ಹೋರಾಡಿ ಲಾಕ್ಡೌನ್ ಅವಧಿಯಲ್ಲಿ ಕೊರೊನಾ ವಾರಿರ್ಸ್ಆಗಿ ನಿರಂತರವಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡ ರಜನಿ ಪೈ ಇವರ ಅನನ್ಯ ಸೇವೆಗೆ ಮಹಾರಾಷ್ಟç ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ಇತ್ತೀಚೆಗೆ ಸನ್ಮಾನಿಸಿ ಗೌರವಿಸಿದ್ದರು.

