ಬಂಟ್ವಾಳ: ಜೇಸಿಐ ಬಂಟ್ವಾಳ ಇದರ ನೂತನ ಅಧ್ಯಕ್ಷರಾಗಿ ಯುನೈಟೆಡ್ ಟಿವಿಎಸ್‌ನ ಮಾಲಕ ಉಮೇಶ್ ಆರ್. ಮೂಲ್ಯ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ರೋಷನ್ ರೈ, ಕೋಶಾಧಿಕಾರಿಯಾಗಿ ರವೀಣ ಕುಲಾಲ್, ವಿವಿಧ ವಿಭಾಗಗಳ ಉಪಾಧ್ಯಕ್ಷರಾಗಿ ರಾಜೇಂದ್ರ, ದಯಾನಂದ ಎಡ್ತೂರು, ಶ್ರೀನಿವಾಸ್ ಅರ್ಬಿಗುಡ್ಡೆ, ಕಿಶೋರ್ ಆಚಾರ್ಯ, ಅಕ್ಷಯ್ ಆಯ್ಕೆಯಾಗಿದ್ದಾರೆ.BTW_DCE22_2

ಪದಗ್ರಹಣ ಸಮಾರಂಭ:
ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಡಿ. ೨೬ರಂದು ಶನಿವಾರ ಸಂಜೆ ೭ ಗಂಟೆಗೆ ಮೊಡಂಕಾಪುವಿನ ಸಾಯಿರಾಮ್ ಮೈದಾನದಲ್ಲಿ ನಡೆಯಲಿದೆ. ವಲಯ ೧೫ರ ಚುನಾಯಿತ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸುವರು, ಮುಖ್ಯ ಅತಿಥಿಯಾಗಿ ಮಂಗಳೂರು ಶ್ರೀನಿವಾಸ್ ಯುನಿವರ್ಸಿಟಿಯ ಮುಖ್ಯ ವೈದ್ಯಕೀಯ ಅಧಿಕಾರಿ. ಡಾ. ಅಣ್ಣಯ್ಯ ಕುಲಾಲ್ ಉಳ್ತೂರು, ಅತಿಥಿಯಾಗಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಂಟ್ವಾಳ ಘಟಕದ ಅಧ್ಯಕ್ಷ ಜಯಾನಂದ ಪೆರಾಜೆ ಹಾಗೂ ಪದಗ್ರಹಣ ಅಧಿಕಾರಿಯಾಗಿ ವಲಯ ೧೫ರ ಪ್ರಾಂತ್ಯ ಎಫ್‌ನ ಉಪಾಧ್ಯಕ್ಷ ಶರತ್ ಕುಮಾರ್ ಭಾಗವಹಿಸಿವರು.

By suddi9

Leave a Reply

Your email address will not be published. Required fields are marked *