ಬಂಟ್ವಾಳ: ಬಂಟ್ವಾಳ ತಾಲೂಕು ಮಡಿವಾಳರ ಸಮಾಜ ಸೇವಾ ಸಂಘ(ರಿ.)ದ ೨೯ನೇ ವರ್ಷದ ವಾರ್ಷಿಕ ಮಹಾಸಭೆ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಸಜೀಪಮೂಡ ಗ್ರಾಮದ ಕಂದೂರು ಶ್ರೀ ಮಾಚಿದೇವ ಸಮುದಾಯ ಭವನದಲ್ಲಿ ನಡೆಯಿತು. 
ಸಂಘದ ಅಧ್ಯಕ್ಷರಾದ ಎನ್.ಕೆ ಶಿವ ಅವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆಜರಗಿತು. ದ.ಕ ಜಿಲ್ಲಾ ಮಡಿವಾಳ ಸಂಘ(ರಿ.)ದ ಅಧ್ಯಕ್ಷ ಬಿ.ಎನ್ ಪ್ರಕಾಶ್ರವರು ಅತಿಥೊಯಾಗಿ ಭಾಗವಹಿಸಿ ಮಾತನಾಡಿ, ಕೊರೋನಾದಿಂದಾಗಿ ಈ ಸಾಲಿನಲ್ಲಿ ಸಂಘ ಚಟುವಟಿಕೆ ಕುಂಠಿತವಾಗಿದ್ದು, ಮುಂದಿನ ವರ್ಷ ಸಮಾಜ ಬಾಂಧವರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಸಂಘದ ಏಳಿಗೆಗೆ ವ್ಯವಹರಿಸಬೇಕೆಂ ಜೊತೆ ಕಾರ್ಯದರ್ಶಿ ಮೋಹನ ಕುಕ್ಕಾಜೆ ವರದಿ ವಾಚಿಸಿದರು. ಮತ್ತು ಪುಷ್ಪರಾಜ ಕುಕ್ಕಾಜೆ ಅವರು ಲೆಕ್ಕ ಪತ್ರವನ್ನು ಮಂಡಿಸಿದರು.
ಸಂಘದ ಗೌರವಾಧ್ಯಕ್ಷರಾದ ಸಂದೇಶ್ ಕುಕ್ಕಾಜೆ ಉಪಸ್ಥಿತರಿದ್ದರು.ಕಾರ್ಯದರ್ಶಿ ಹರೀಶ್.ಎಮ್ ಮಂಕುಡೆಯವರು ವಂದಿಸಿದರು.
