ಬಂಟ್ವಾಳ: ಹಿಂದೂ ಯುವ ಸೇನೆ ಬಂಟ್ವಾಳ ತಾಲೂಕು ಘಟಕದ ಮಹಾಸಭೆಯು ಶ್ರೀ ವೈದ್ಯನಾಥ ದೈವಸ್ಥಾನ ಬಂಟ್ವಾಳ ಇದರ ವಠಾರದಲ್ಲಿ ಜರಗಿತು. ಈ ಸಭೆಯಲ್ಲಿ ತಾಲೂಕು ಘಟಕದ ನೂತನ ಸಮಿತಿಯನ್ನು ಪುನ: ರಚಿಸಲಾಯಿತು. ನೂತನ ಸಮಿತಿಯ ಗೌರವ ಅಧ್ಯಕ್ಷರಾಗಿ ಶಿವರಾಮ್ ಶೆಟ್ಟಿ ಜಕ್ರಿಬೆಟ್ಟು ,ಅಧ್ಯಕ್ಷರಾಗಿ ಪುಷ್ಪರಾಜ್ ಜಕ್ರಿಬೆಟ್ಟು ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿಯಾಗಿ ವಸಂತ್ ಕುಮಾರ್ ವಿ ಮಣಿಹಳ್ಳ ,ಗೌರವ ಸಲಹೆಗಾರರಾಗಿ ಪದ್ಮನಾಭ ಯು. ಎಸ್. ನಾವೂರು, ರಾಮಚಂದ್ರ ಗೌಡ ಮಣಿ , ಜಯರಾಜ ರಾಮನಗರ ,ಸುಂದರ ಪೂಜಾರಿ ಮಜಲೋಡಿ ಮತ್ತು ಸಮಿತಿಯ ಇತರ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಸರ್ವಾನುಮತದಿಂದ ಆರಿಸಲಾಯಿತು.
ವಸಂತ ಕುಮಾರ್ ವಿ ಸ್ವಾಗತಿಸಿ ಶಿವಪ್ರಸಾದ್ ಬಂಟ್ವಾಳ ಕಾರ್ಯಕ್ರಮ ನಿರ್ವಹಿಸಿದರು.
