ಬಂಟ್ವಾಳ: ತಾಲೂಕಿನ  ನರಿಕೊಂಬು ಗ್ರಾಮದ ನಾಟಿ ಸಜಂಕಪಲಿಕೆಯ ಯೋಧ ನಾಗೇಶ ಅವರ ಮನೆಯಲ್ಲಿ ರವಿವಾರ ಬಂಟ್ವಾಳ   ಕ್ಷೇತ್ರ ಬಿಜೆಪಿ ವತಿಯಿಂದ   ದೀಪಾವಳಿಯನ್ನು ಆಚರಿಸಲಾಯಿತು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ದೀಪ ಬೆಳಗಿಸಿ ಶುಭ ಹಾರೈಸಿ ಕರ್ತವ್ಯದಲ್ಲಿದ್ದ ಯೋಧ ನಾಗೇಶ್ ರವರೊಂದಿಗೆ ವಿಡಿಯೋ ಕರೆಯ ಮೂಲಕ ಮಾತನಾಡಿ ದೀಪಾವಳಿಯ ಶುಭಾಶಯ ತಿಳಿಸಿದರು.

IMG-20201115-WA0101

ಬಳಿಕ ಯೋಧ ನಾಗೇಶ್ ಅವರ ಮನೆಯವರೊಂದಿಗೆ ಮಾತನಾಡಿ ದೇಶ ಸೇವೆ ಗೈಯ್ಯುವ ಯೋಧರೊಂದಿಗೆ ದೀಪಾವಳಿ ಆಚರಿಸುವ ಮೂಲಕ ಪ್ರಧಾನಿ  ನರೇಂದ್ರ ಮೋದಿಯವರು  ನಮ್ಮೆಲ್ಲರಿಗೆ ನೀಡಿದ ಪ್ರೇರಣೆಯ ಈ ಕಾರ್ಯಕ್ರಮ ಸಂತೋಷ ತಂದಿದೆ ಎಂದರು.

IMG-20201115-WA0102

ಈ ಸಂದರ್ಭದಲ್ಲಿ ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ,ಬೂಡ ಅಧ್ಯಕ್ಷರಾದ ದೇವದಾಸ ಶೆಟ್ಟಿ ,ಪ್ರ.ಕಾರ್ಯದರ್ಶಿ ಡೊಂಬಯ ಅರಳ,ಕಾರ್ಯದರ್ಶಿಗಳಾದ ರಮಾನಾಥ ರಾಯಿ,ಸೀತಾರಾಮ ಪೂಜಾರಿ,ಪುರುಷೋತ್ತಮ ಶೆಟ್ಟಿ ವಾಮದಪದವು,ಯುವ ಮೋರ್ಚಾದ ಸುದರ್ಶನ್ ಬಜ,ಸುರೇಶ್ ಕೋಟ್ಯಾನ,ಮಹಾಶಕ್ತಿ ಕೇಂದ್ರ ಪ್ರ. ಕಾರ್ಯದರ್ಶಿ ಯಶೋಧರ ಕರ್ಬೆಟ್ಟು, ಪ್ರಮುಖರಾದ ಕಿಶೋರ್ ಶೆಟ್ಟಿ ,ಪ್ರೇಮನಾಥ ಶೆಟ್ಟಿ,ಸುರೇಂದ್ರ,ಲೋಕೇಶ್ ನಾಟಿ,ನಾರಾಯಣ ಪೂಜಾರಿ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. IMG-20201115-WA0097

By suddi9

Leave a Reply

Your email address will not be published. Required fields are marked *