ಮೂಡುಬಿದಿರೆ: ಬೆಳುವಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಠದಕೆರೆಗೆ ಭಾನುವಾರ ಸ್ನೇಹಿತರೊಂದಿಗೆ ಈಜಲು ಬಂದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ

ಸುರತ್ಕಲ್ ಸಮೀಪದ ಕಾಟಿಪಳ್ಳ ನಿವಾಸಿ ನಿಹಾಲ್ ಶಾ( 20 ) ಮೃತಪಟ್ಟ ಯುವಕ. ಈತ ತನ್ನ ಏಳು ಮಂದಿ ಸ್ನೇಹಿತರೊಡನೆ ಬಾನುವಾರ ಸಾಯಂಕಾಲ ಈಜಲು ಬಂದಿದ್ದ. ಈಜುವ ಸಂದರ್ಭ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಭಾನುವಾರ ರಾತ್ರಿ ಈತನ ಶವವನ್ನು ಬೆಳುವಾಯಿಯ ಈಜುಗಾರ ಅಂಥೋಣಿ ಎಂಬವರು ಮೇಲಕ್ಕೆತ್ತಿದ್ದಾರೆ..

ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *