ಬಂಟ್ವಾಳ:  ದಿನವಿಡೀ ಬಂಟ್ವಾಳ ತಾಲೂಕಿನಲ್ಲಿ ಶಿಲಾನ್ಯಾಸ ಕಾರ್ಯಕ್ರಮವನ್ನು ನಡೆಸಿ  ಕಡೇಶಿವಾಲಯ ಗ್ರಾಮದೆಡೆ ಹೊರಟ ಬಂಟ್ವಾಳದ ದೊರೆ ರಾಜೇಶ್ ನಾಯ್ಕ್ ಉಳಿಪಾಡಿ ಅವರು, ಬಿಜೆಪಿಯ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಸೇರಿಕೊಂಡು ಅಲ್ಲಿಂದ ಮತ್ತೆ ಗ್ರಾಮದ ಅಭಿವೃದ್ಧಿ ಕಾಮಗಾರಿಯ ಶಿಲಾನ್ಯಾಸಕ್ಕೆ ತೆರಳಲು ಸಿದ್ದತೆ ನಡೆಸಿ ತನ್ನ ರಥ ವೇರಲು ಬರುತಿದ್ದಂತೆ ಕಂಡದ್ದು ಶಾಸಕರಿಂದ ಸ್ವಯಂ ಉದ್ಯೋಗ ಯೋಜನೆಯಡಿ ಆಟೋ‌ ಪಡೆದ ಮೋಹನ್ ನಾಯ್ಕ್..IMG-20201101-WA0103

 ಇವರು ತನ್ನ ಆಟೋ ರಿಕ್ಷಾ ತೋರಿಸುತಿದ್ದಂತೆ ತನ್ನ ರಥ ಬಿಟ್ಟ ಶಾಸಕರು ಮೋಹನ್ ರಥವೇರಿ ಶಿಲಾನ್ಯಾಸದ ಕಡೆ ಪಯಣ ಬೆಳಸಿದರು. ಭಾನುವಾರ ರಿಕ್ಷಾ ಚಾಲಕ ಮೋಹನ್ ನಾಯ್ಕ್ ಸಾಮಾಜಿಕ ಜಾಲಾತಾಣದಲ್ಲಿ  ಹೀರೊ ಆಗಿ ಬಿಂಬಿತವಾದರೆ, ಶಾಸಕ ರಾಜೇಶ್ ನಾಯ್ಕ್ ಅವರ ಸರಳತೆ ಮತ್ತೆ ಮತ್ತೆ ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು.

By suddi9

Leave a Reply

Your email address will not be published. Required fields are marked *