ಬಂಟ್ವಾಳ:ಸುವರ್ಣ ಕ್ರಿಯೇಶನ್ಸ್ ಬಿ.ಸಿ.ರೋಡ್ ನಿರ್ಮಾಣದ “ಪದ್ದೈ ಬಂಗಾರ್” ತುಳು ಕಿರುಚಿತ್ರದ ಮುಹೂರ್ತ ಕಾರ್ಯಕ್ರಮ ಶ್ರೀ ಕ್ಷೇತ್ರ ಪನೋಲಿಬೈಲ್ ನಲ್ಲಿ ಗುರುವಾರ ನಡೆಯಿತು.ಕಾರಣಿಕ ದೈವ ಶ್ರೀ ಕಲ್ಲುರ್ಟಿ ಸಾನ್ನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಿ ಮುಹೂರ್ತ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕಿರುಚಿತ್ರದ ಪ್ರಥಮ ಪೋಸ್ಟರ್ ಅನ್ನು ಚಲನಚಿತ್ರ ಯುವ ನಿರ್ದೇಶಕ, ನಾಟಕಕಾರ ಜೆ.ಪಿ. ತೂಮಿನಾಡ್ ಅವರು ಬಿಡುಗಡೆಗೊಳಿಸಿ ಶುಭಹಾರೈಸಿದರು.image_750x_5f91327f82069

ಚಲನ ಚಿತ್ರ, ರಂಗಭೂಮಿ ನಟ ಪ್ರಕಾಶ್ ತೂಮಿನಾಡು, ಶಮಿಲ್ ಬಂಗೇರ, ನಿಮಾ೯ಪಕರಾದ ಲಕ್ಷೀಶ್ ಕುಲಾಲ್ ಪನೋಲಿಬೈಲ್, ಜಯರಾಜ್ ಅತ್ತಾಜೆ, ನಿರ್ದೇಶಕ ರಚನ್ ಆಲಾಡಿ, ಛಾಯಾಗ್ರಾಹಕ ತ್ರಿಶಾಲ್ ಶೆಟ್ಟಿ ಪೂಂಜ, ಕಲಾವಿದರಾದ ರತ್ನದೇವ್ ಪುಂಜಾಲಕಟ್ಟೆ, ಉಮೇಶ್ ಮಜಲೋಡಿ, ಯಶೊದರ್ ನೆಲ್ಲಿಗುಡ್ಡೆ, ವಿನೋದ್ ರಾಜ್ , ವೆಂಕಟೇಶ್ ಕಕ್ಯಪದವು, ಶಿವರಾಜ್ , ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.

ಲಕ್ಷ್ಮೀಶ ಕುಲಾಲ್, ಜಯರಾಜ ಅತ್ತಾಜೆ ನಿರ್ಮಾಣದ, ಯುವ ಕಲಾವಿದ ರಚನ್ ಆಲಾಡಿ ನಿರ್ದೇಶನ ದಲ್ಲಿ “ಪದ್ದೈ ಬಂಗಾರ್ “ತುಳು ಕಿರುಚಿತ್ರ ಶೀಘ್ರ ತೆರೆ ಕಾಣಲಿದೆ.

By suddi9

Leave a Reply

Your email address will not be published. Required fields are marked *