ಬಂಟ್ವಾಳ: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಿಂದ ಬಂಟ್ವಾಳ ತಾಲೂಕಿನ ವಿವಿಧೆಡೆ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಸೋಮವಾರ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರು ಪರಿಶೀಲಿಸಿದರು.IMG-20201012-WA0079

ಕೊಳ್ನಾಡು ಹಾಗೂ ಪಾಣೆಮಂಗಳೂರಿನ ಮೀನು ಮಾರುಕಟ್ಟೆಯ ಕಾಮಗಾರಿ, ಸಜೀಪನಡು ಗ್ರಾಮದ ಅಂಕದಕೋಡಿಯಲ್ಲಿ ಸೇತುವೆ ಕಾಮಗಾರಿ ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.IMG-20201012-WA0081
ಜಿ.ಪಂ.ಸದಸ್ಯ ರವೀಂದ್ರ ಕಂಬಳಿ, ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜಾ, ವಲಯ ಅಧಿಕಾರಿ ಚಂದ್ರಕಾಂತ್, ಎಂಜಿನಿಯರ್ ಪವನ್ ಶೆಟ್ಟಿ, ಪಣೋಲಿಬೈಲು ಇಒ ಜಯಮ್ಮ, ಬಂಟ್ವಾಳ ಪಂಚಾಯತ್‌ರಾಜ್ ಎಇಇ ತಾರಾನಾಥ ಸಾಲ್ಯಾನ್, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಮೊದಲಾದವರಿದ್ದರು.IMG-20201012-WA0081

By suddi9

Leave a Reply

Your email address will not be published. Required fields are marked *