ಬಂಟ್ವಾಳ: ತಾಲೂಕು ಕೃಷಿ ಉತ್ಪನ್ನ ಸಹಕಾರ ಸಂಘ.( ನಿ )ದ ಆಡಳಿತ ಮಂಡಳಿಗೆ ಸೋಮವಾರ ನಡೆದ ಸಭೆಯ ಚುನಾವಣೆಯಲ್ಲಿ ಜಿಪಂ ಸದಸ್ಯ ರವೀಂದ್ರ ಕಂಬಳಿ ಅವರ ನೇತೃತ್ವದ15ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸಾಮಾನ್ಯ ಕ್ಷೇತ್ರದಿಂದ ರವೀಂದ್ರ ಕಂಬಳಿ , ಬಿ ಟಿ ನಾರಾಯಣ ಭಟ್ , ರತ್ನಾ , ಶಶಿಕಲಾ ಉಡುಪ , ಸುಂದರ ಭಂಡಾರಿ , ಪದ್ಮನಾಭ ಕಿದೆಬೆಟ್ಟು ರಾಮ ನಾಯ್ಕ,ಪೂವಪ್ಪ ,ಸಹಕಾರ ಕ್ಷೇತ್ರದಿಂದ ರಾಜೇಶ್ ಶೆಟ್ಟಿ , ಮನೋರಾಜ್ ಎ , ಜ್ಞಾನೇಶ್ವರ ಪ್ರಭು , ಪಿ ವೆಂಕಟೇಶ್ ನಾವುಡ , ರೋಹಿನಾಥ್ ಕೆ ,ಉಮೇಶ್ ಪೂಜಾರಿ ವೆಂಕಟ್ರಾಯ ಪ್ರಭು ಆಯ್ಕೆಯಾಗಿದ್ದಾರೆ. ಮಂಗಳೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸುದೀರ್ ಕುಮಾರ್ ಜೆ ಅವರು ಚುನಾವಣಾಧಿಕಾರಿಯಾಗಿ ಆಯ್ಕೆ ಪ್ರಕಿಯೆ ನಡೆಸಿದರು.
