ಬಂಟ್ವಾಳ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಯವರ ಜನ್ಮ ದಿನದ ಪ್ರಯುಕ್ತ ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲುಗಳನ್ನ ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷರಾದ ರೊ. ಪಿ. ಎಚ್. ಎಫ್. ಪದ್ಮನಾಭ ರೈ ಇವರ ಮುಂದಾಳತ್ವದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕ್ಲಬ್ಬಿನ ಕಾರ್ಯದರ್ಶಿ ಕಿಶೋರ್, ಅನ್ಸ್ ಕ್ಲಬ್ಬ್ಬಿನ ನೂತನ ಅಧ್ಯಕ್ಷೆ ರೊ. ಸವಿತಾ ಚಿತ್ತರಂಜನ್ ಶೆಟ್ಟಿ, ರೋಟೋರಿಯನ್ಸ್ ಸುಜಾತ ಪಿ ರೈ, ಚಿತ್ತರಂಜನ್ ಶೆಟ್ಟಿ, ಜ್ಯೋತಿಂದ್ರ ಶೆಟ್ಟಿ, ದಿವಾಕರ್ ಶೆಟ್ಟಿ, ನಾಗೇಶ್ ಕುಲಾಲ್, ಕೇಶವ ನಾಯ್ಕ್, ದಯಾನಂದ ಶೆಟ್ಟಿ, ಉಮೇಶ್ ನೆಲ್ಲಿಗುಡ್ಡೆ, ಅಷಮಣಿ ಡಿ ರೈ, ನಾರಾಯಣ ಸಿ ಪೆರ್ಣೆ, ಗಣೇಶ್ ಶೆಟ್ಟಿ, ಸುಂದರ್ ಬಂಗೇರ ಉಪಸ್ಥಿತರಿದ್ದರು.
