ಬಂಟ್ವಾಳ: ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಹಿಂದೂ ರುದ್ರಭೂಮಿಯ ನವೀಕರಣಕ್ಕೆ ಬಂಟ್ವಾಳ ಗ್ಯಾರೇಜು ಮಾಲಕರ ಸಂಘದಿಂದ ಧನ ಸಹಾಯವನ್ನು ವಿತರಿಸಲಾಯಿತು. ರುದ್ರ ಭೂಮಿ ಸಮಿತಿ ಅಧ್ಯಕ್ಷರಾದ ಕೇಶವ ದೈಪಲ ಹಾಗು ಸಮಿತಿ ಪದಾಧಿಕಾರಿಗಳಲ್ಲಿ ಸಹಾಯಧನದ ಚೆಕ್ ನ್ನು ಹಸ್ತಾಂತರಿಸಲಾಯಿತು ,
ಈ ಸಂಧರ್ಭದಲ್ಲಿ ಗ್ಯಾರೇಜು ಮಾಲಕರ ಸಂಘದ ಆಧ್ಯಕ್ಷರಾದ ಅಣ್ಣು ಪೂಜಾರಿ , ಕಾರ್ಯದರ್ಶಿ ಸುರೇಶ್ ಕುಲಾಲ್ , ಕೋಶಾಧಿಕಾರಿ ರಾಜೇಶ್ ಕುಲಾಲ್ , ಉಪಾಧ್ಯಕ್ಷರಾದ ನವೀನ್ ಕುಲಾಲ್ , ಗೌರವ ಸಲಹೆಗಾರರಾದ ರಾಜೇಶ್ ಸಾಲ್ಯಾನ್ , ಸುಧಾಕರ್ ಸಾಲ್ಯಾನ್ , ಕ್ರೀಡಾ ಕಾರ್ಯದರ್ಶಿ ಭಾಸ್ಕರ್ ಕುಲಾಲ್ , ಸಂಘದ ಪ್ರಮುಖರಾದ ರಮೇಶ್ ಭಂಡಾರಿ , ಶೇಖರ್ ಆಚಾರ್ , ರಮೇಶ್ ಬೈಪಾಸ್ ಉಪಸ್ಥಿತರಿದ್ದರು
