ಬಂಟ್ವಾಳ: ತಾಲೂಕಿನ ಮಣಿನಾಲ್ಕೂರು ಗ್ರಾಮದ ಕೈಯಾಳ ಎಂಬಲ್ಲಿ ವಿದ್ಯುತ್ ಸಂಪರ್ಕವಿಲ್ಲದ ವಿಕಲಚೇತನೆ ಮೋಹಿನಿ ಗೋಪಾಲ ಪೂಜಾರಿ ಎಂಬವರ ಮನೆಗೆ  ಸ್ಥಳೀಯ ಬಿಜೆಪಿ ಸಮಿತಿಯಿಂದ  ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು.IMG-20200721-WA0045

ಕಡು ಬಡತನದ ಮೋಹಿನಿ ಗೋಪಾಲಪೂಜಾರಿಯವರ ಮನೆಗೆ ವಿದ್ಯುತ್ ಸಂಪರ್ಕವಿಲ್ಲದೆ ಚಿಮಿಣಿದೀಪದಲ್ಲಿ ರಾತ್ರಿಕಳೆಯುತ್ತಿದ್ದರು. ಇವರ ಮನವಿ ಮೇರೆಗೆ ಬಿ.ಜೆ.ಪಿ ಯ ಪ್ರಮುಖರಾದ ಸಾಂತಪ್ಪ ಪೂಜಾರಿ ಹಟದಡ್ಕ,  ಸ್ಥಳೀಯ 95 ಬೂತ್ ಸಮಿತಿಯ ಅಧ್ಯಕ್ಷ ದೇವಾದಾಸ್ ನಾಯಕ್ ಹಾಗೂ ಕಕ್ಯಪದವು ಮೆಸ್ಕಾಂ  ಶಾಖಾ ಅಧಿಕಾರಿ ನಿತಿನ್ ರವರ ಸಹಕಾರದಲ್ಲಿ  ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.

ಈ ಸಂದರ್ಭದಲ್ಲಿ ಭಜರಂಗದಳದ ಪ್ರಮುಖರಾದ ಸಂತೋಷ್ ಕುಲಾಲ್, ರವೀಂದ್ರ ಶೆಟ್ಟಿ ಕೈಯಾಳ,ಕ್ರಷ್ಣಪ್ಪ ಪೂಜಾರಿ, ರಾಜೇಶ್ ಕೈಯಾಳ ಪುರುಷೋತ್ತಮ ಕೈಯಾಳ, ಸುಧಾಕರ ಕೈಯಾಳ, ರೂಪೇಶ್ ಪೂಜಾರಿ ಕೊಡಂಗೆ, ದಿನೇಶ್ ಕೈಯಾಳ, ಜನರ್ದನ ಕೈಯಾಳ, ಸುನಿಲ್ ಪ್ರೀತಂ ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *