ವಿಟ್ಲ: ದ ಕ ಜಿಲ್ಲಾ ದಲಿತ್ ಸೇವಾ ಸಮಿತಿಯ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು ಇವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇತ್ತೀಚೆಗೆ ಭಾರತದ ಗಡಿಯಲ್ಲಿ ಚೀನೀ ಸೈನಿಕರಿಂದ ವೀರ ಮರಣ ಹೊಂದಿದ ಸೈನಿಕರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಮತ್ತು ಲಾಕ್ ಡೌನ್ ಸಂದರ್ಭದಲ್ಲಿ ತೊಂದರೆಗೀಡಾದ ಬಡ ಕುಟುಂಬಗಳಿಗೆ ಸಂಘಟನೆ ವತಿಯಿಂದ ಕಿಟ್ ವಿತರಿಸಲು ಸಹಕರಿಸಿದವರಿಗೆ ಕೃತ್ಞತೆ ಸಲ್ಲಿಸಲಾಯಿತು.

ದಲಿತ್ ಸೇವಾ ಸಮಿತಿ ಮಂಗಳೂರು ಶಾಖೆಯ ಅಧ್ಯಕ್ಷ ಶ್ರೀಧರ ಮಂಜನಾಡಿ,ಪುತ್ತೂರು ಶಾಖೆಯ ಅಧ್ಯಕ್ಷ ಅಣ್ಣಪ್ಪ ಕಾರೆಕಾಡು, ಜಿಲ್ಲಾ ಗೌರವ ಸಲಹೆಗಾರ ಸೋಮಪ್ಪ ನಾಯ್ಕ ಮಲ್ಲ ಹಾಗೂ ಇತರ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ಮತ್ತು ತಾಲೂಕು ಪದಾಧಿಕಾರಿಗಳು ಭಾಗವಹಿಸಿದ್ದರು.
