ಮಂಗಳೂರು: ಸರಕಾರದ ಕಾರ್ಯಕ್ರಮ ವಾದ ಯುವ ಸ್ಪಂದನ ಅರಿವು ಕಾರ್ಯಕ್ರಮ ದ.ಕ. ಜಿಲ್ಲೆಯಲ್ಲಿ ಡಿಸೆಂಬರ್ 2019 ರ ಅಂತ್ಯಕ್ಕೆ 3,270 ಜನರಿಗರ ತಲುಪಿದ್ದು ಜಿಲ್ಲೆಯ ಎಲ್ಲ ವರ್ಗದ ಜನರಿಗೆ ತಲುಪಲು ಎಲ್ಲರ ಸಹಕಾರ ಅವಶ್ಯ ಎಂದು ಯುವ ಸಬಲೀಕರಣ ,ಕ್ರೀಡಾ ಇಲಾಖೆಯ ಯುವಸ್ಪಂದನ ಅಧಿಕಾರಿ ಡೊಂಬಯ್ಯ ಇಡ್ಕಿದು ಹೇಳಿದರು.
ಮಟಪಾಡಿ ಯಲ್ಲಿ ದ.ಕ. ಜಿಲ್ಲಾ ಪತ್ರಕರ್ತರ ಗ್ರಾಮವಾಸ್ತವ್ಯ ದ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು ಯುವ ಜನರ ಮಾನಸಿಕ ಹಾಗೂ ದೈಹಿಕ ಸಮಸ್ಯೆ ಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಶ್ರಮಿಸಲಿದೆ ಎಂದರು. ಇಲಾಖೆಗೆ ಶ್ರೀಕಾಂತ್ ಪೂಜಾರಿ ಬಿರಾವು ಮಾತನಾಡಿ, ಯುವಸ್ಪಂದನ ಎಲ್ಲ ಹಂತದಲ್ಲಿ ಎಲ್ಲರನ್ನು ಗಣನೆಗೆ ತೆಗೆದುಕೊಂಡು ವಿನ್ಯಾಸ ಮಾಡಿದ ವಿಶಿಷ್ಟ ಕಾರ್ಯಕ್ರಮ. ರಾಜ್ಯದಲ್ಲಿ ಯುವ ಜನತೆಗೋಸ್ಕರ ಸೇವೆ ನೀಡುವ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆ ಎಂದರು.
Attachments area

