ಕಟೀಲು:ಕಟೀಲುಶ್ರೀದುರ್ಗಾಪರಮೇಶ್ವರೀದೇವಳದಲ್ಲಿನಡೆಯಲಿರುವಬ್ರಹ್ಮಕಲಶೋತ್ಸವದಪೂರ್ವಭಾವಿಯಾಗಿಧಾರ್ಮಿಕಕಾರ್ಯಕ್ರಮಗಳಅಂಗವಾಗಿಋಕ್ಸಂಹಿತಾಯಾಗಹಾಗೂಕೋಟಿಜಪಯಜ್ಙದ ಸಾಮೂಹಿಕ ಸಂಕಲ್ಪ ಕಾರ್ಯಕ್ರಮಭಾನುವಾರಧಾರ್ಮಿಕವಿಧಿಗಳೊಂದಿಗೆಜರಗಿತು.ದೇವಳದಒಳಾಂಗಣದಗರ್ಭಗುಡಿಯಸುತ್ತಅಷ್ಟಕುಂಡಗಳಲ್ಲಿಏಕಕಾಲದಲ್ಲಿಋಗ್ವೇದಆಧಾರಿತಮಂತ್ರಪಠಣದೊಂದಿಗೆನಡೆದಯಾಗದಪ್ರಧಾನಕಲಶವನ್ನುಶ್ರೀದೇವರಿಗೆಅಭಿಷೇಕಮಾಡುದರೊಂದಿಗೆಸಂಪ್ಪನ್ನಗೊಂಡಿತು.
48 ದಿನಗಳಭಜನೆ – ಸಂಕೀರ್ತನೆಪ್ರಾರಂಭ:
ಡಿ.15 ಭಾನುವಾರ ದಿಂದ ಮೊದಲ್ಗೊಂಡು 48 ದಿನಗಳ ಕಾಲ ದೇವಳದಲ್ಲಿ ಬೆಳಿಗ್ಗೆ 9 ರಿಂದಸಂಜೆ 6 ರ ತನಕ ನಿರಂತರ ಭಜನೆ – ಸಂಕೀರ್ತನೆ ಬ್ರಹ್ಮಕಲಶೋತ್ಸವ ಪ್ರಯುಕ್ತ ಪ್ರಾರಂಭಗೊಂಡಿತು.
48 ದಿನಗಳಕೋಟಿಜಪಯಜ್ಷಕ್ಕೆಸಂಕಲ್ಪ:
ಸುಮಾರು7ಸಾವಿರ ಮಂದಿ ಎಕ್ಕಾರು ಹಾಗೂ ಮುರು ಕಾವೇರಿಗಳಿಂದ ಪಾದಯಾತ್ರೆಯಲ್ಲಿ ಆಗಮಿಸಿ ಮೂಲ ಸಾನಿಧ್ಯಕುದುರು ಭ್ರಾಮರೀವನದಲ್ಲಿ ಆಸ್ರಣ್ಣರಿಂದ ಮಂತ್ರಾಕ್ಷತೆ ಹಾಗೂ ಕಂಕಣದಾರ ಸ್ವೀಕರಿಸಿಸಂಕಲ್ಪದೀಕ್ಷೆಗೆ ಸಿದ್ದಪಡಿಸಿದ ಜಾಗದಲ್ಲಿ ವಿಧಿಗಳು ಜರಗಿದವು.
108 ಬಾರಿಎಲ್ಲಾವ್ರತಧಾರಿಗಳು
‘ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ ಶರಣ್ಯೇತ್ರ್ಯಂಬಕೇ ಗೌರೀ ನಾರಯಣೆ ನಮೋಸ್ತುತೆ’ ಶ್ಲೋಕವನ್ನು 7.56 ಲಕ್ಷ ಬಾರಿ ಪಠಿಸಿದರು. ಅರ್ಚಕ ಹರಿನಾರಾಯಣ ದಾಸಆಸ್ರಣ್ಣ,ವ್ರತ ನಿಯಮ ಭೋದಿಸಿದರು. ಸ್ಕಂದ ಭಟ್ಶ್ಲೋಕವಾಚನ ಭೋದಿಸಿದರು. ಮಾಣೆಲಶ್ರೀಮೋಹನದಾಸ ಸ್ವಾಮೀಜಿ ಪೂರ್ವಭಾವಿ ಮಾಹಿತಿ ನೀಡಿದರು.
ಕೋಟಿಜಪಯಜ್ಙಸಮಿತಿಯ ಅಧ್ಯಕ್ಷ ಕೊಂಡೆವೂರು ಶ್ರೀಯೋಗಾನಂದ ಸರಸ್ವತೀಸ್ವಾಮೀಜಿ ,ಗೌರವಾಧ್ಯಕ್ಷ ಕಮಲಾದೇವಿ ಪ್ರಸಾದಆಸ್ರಣ್ಣ, ಅನುವಂಶಿಕ ಅರ್ಚಕ ಹಾಗೂ ಮೊಕ್ತೇಸರ ವಾಸುದೇವಆಸ್ರಣ್ಣ, ಆಡಳಿತಸಮಿತಿ ಅಧ್ಯಕ್ಷ ಹಾಗೂ ಮೊಕ್ತೇಸರ ಸನತ್ ಕುಮಾರ್ ಶೆಟ್ಟ ಅರ್ಚಕ ಅನಂತಪದ್ಮನಾಭ ಆಸ್ರಣ್ಣ,ವೆಂಕಟರಮಣಆಸ್ರಣ್ಣ, ಶಾಸಕ ಉಮಾನಾಥಕೊಟ್ಯಾನ್, ಕೋಟಿಜಪಯಜ್ಙ ಸಮಿತಿಯ ಕಾರ್ಯದರ್ಶಿ ಗಿರಿಧರಶೆಟ್ಟಿ, ಭಾಸ್ಕರದೇವಸ್ಯ, ಈಶ್ವರ ಕಟೀಲು ಮತ್ತಿತರರು ಪಾಲ್ಗೊಂಡಿದ್ದರು. ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಬಳಿಕ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ,ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಸುದ್ದಿಗಾರರ ಜತೆ ಮಾತನಾಡಿ – ಬ್ರಹ್ಮಕಲಶೋತ್ಸವದ ಸಿದ್ದತೆಗಳು ವ್ಯವಸ್ಥಿತವಾಗಿ ನಡೆಯುತ್ತಿದೆ. ಕೋಟಿಜಪಯಜ್ಷ ಸಮಾಜದ ಎಲ್ಲರನ್ನು ಏಕಮನಸ್ಸಿನಿಂದ ಒಗ್ಗೂಡಿಸುವದೇ ವಿಸ್ತುತಿ ,ದೇಗುಲದಲ್ಲಿ ಯಾಗನಡೆದಿದೆ. ಒಟ್ಟಿನಲ್ಲಿಕಟೀಲು ಬ್ರಹ್ಮಕಲಶೋತ್ಸವ ಸ್ಮರಣೇಯ ಮತ್ತು ಐತಿಹಾಸಿಕ ಸನ್ನಿವೇಶ ಆಗಲಿದೆ ಎಂದರು.



