ಕೋಲಾರ: ಚುನಾವಣೆ ದಿನ ಸನ್ನಿಹಿತವಾಗುತ್ತಿದ್ದಂತೆ ಕ್ಷೇತ್ರದ ಬಹುತೇಕ ಕಡೆ ಮೂಡಿದ ಆತಂಕ ಇನ್ನಿಲ್ಲದ ಅನಾಹುತಗಳಿಗೆ ಎಡೆ ಮಾಡಿಕೊಟ್ಟಿದೆ.ನಗರದ 6ನೇ ವಾರ್ಡ್, ಕೋಗಿಲಹಳ್ಳಿಯಲ್ಲಿ ಚುನಾವಣೆಗೆ ಹಣ ಹಂಚುವ ವಿಷಯದಲ್ಲಿ ಶುರುವಾಗಿ, ಶನಿವಾರ ನಡೆದ ಹೊಡೆದಾಟ ಪ್ರಕರಣವು ಬರೋಬ್ಬರಿ 6 ಜನ ಮಾರಣಾಂತಿಕ ಹಲ್ಲೆಗೊಳಗಾಗಿ ಪ್ರಸ್ತುತ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದರೊಂದಿಗೆ ದುಃಖಾಂತ್ಯವನ್ನು ಕಂಡಿದೆ.
ಹೆಂಗಸು ಎಂದೂ ನೋಡದೇ ಮಹಿಳೆಯನ್ನೂ ಸೇರಿ 6 ಜನ ಪ್ರಸ್ತುತ ಚಿಕಿತ್ಸೆಯಲ್ಲಿದ್ದಾರೆ. ಗಲಾಟೆ ನಡೆದ ಕೂಡಲೇ ಸಂಬಂಧಿಸಿದ ಕೋಲಾರ ನಗರ ಪೊಲೀಸರಿಗೆ ದೂರು ನೀಡಿದ್ದರೂ, ಪೊಲೀಸರು ಯಾವುದೇ ಕಾನೂನು ಕ್ರಮ ಜರುಗಿಸದೇ ಕೈಚೆಲ್ಲಿದ್ದಾರೆ, ನಾವೆಲ್ಲಾ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಊರಿಗೆ ಮರಳಲು ಹೆದರಿ ಇಲ್ಲಿಯೇ ತಲೆ ಮರೆಸಿಕೊಂಡು ಕುಳಿತ್ತಿದ್ದೇವೆ ಎಂದು ಗಾಯಾಳುಗಳು ಆರೋಪಿಸಿದ್ದಾರೆ.
