ಕುಪ್ಪೆಪದವು:ಇಲ್ಲಿನ ಶ್ರೀ ದುರ್ದುರ್ಗೇಶ್ವರಿ ದೇವಸ್ಥಾನದಲ್ಲಿ ನಡೆದ ಶರನ್ನವ ರಾತ್ರಿ ಉತ್ಸವದಂಗವಾಗಿ 5 ರ ಶನಿವಾರ ಪ್ರತಿಷ್ಠೆ ಯಾಗಿ ನಾಲ್ಕುದಿನ ಪೂಜಿಸಲ್ಪಟ್ಟ ಶ್ರೀ ಶಾರದಾಮಾತೆಯ ವಿಗ್ರಹದ ಶೋಭಾಯಾತ್ರೆ ಮಂಗಳವಾರ ನಡೆಯಿತು ಆಕರ್ಷಕ ಟ್ಯಾಬ್ಲೋ ಗಳು ಚೆಂಡೆ .ವಿವಿಧ ಭಜನಾ.ತಂಡಗಳು .
ಆಕರ್ಷಕ ಸುಡುಮದ್ದು ಪ್ರದರ್ಶನದೊಂದಿಗೆ ನೂರಾರು ಭಕ್ತರು ಭವ್ಯಶೋಭಾ ಯಾತ್ರೆಯಲ್ಲಿ
ಕುಪ್ಪೆಪದವಿನಿಂದ.ಸುಮಾರು ಒಂದೂವರೆ ಕಿಲೋಮೀಟರ್ ದೂರದ ಮುತ್ತೂರಿಗೆ ಸಾಗಿ ಪಲ್ಗುಣಿ ನದಿಯಲ್ಲಿ ವಿಗ್ರಹವನ್ನು ಜಲಸ್ತಂಭನ ಮಾಡಲಾಯಿತು ಮಂಗಳೂರು ಉತ್ತರ ಶಾಸಕ ಡಾ.ಭರತ್ ವೈ ಶೆಟ್ಟಿ .ತಾಲೂಕುಪಂಚಾತ್ ಸದಸ್ಯ .ನಾಗೇಶ್ ಶೆಟ್ಟಿ ಮುತ್ತೂರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು

