ಬೆಂಗಳೂರು : ಗಿರಿನಗರದ ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಚಾತುರ್ಮಾಸ್ಯದ ಧಾರ್ಮಿಕ ಸಭೆಯಲ್ಲಿ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಶೇ 96.66 ಅಂಕ ಗಳಿಸಿದ ವಿಟ್ಲದ ವಿಟ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ನಿಶಾಂತ್ ಭಟ್ ಇವರನ್ನು ಶ್ರೀಯವರು ಗೌರವಿಸಿದರು. ಇವರು ನೆತ್ರಕೆರೆ ಗಣೇಶ್ ಮತ್ತು ಅನಿತಾ ದಂಪತಿ ಪುತ್ರ.

