ವಿಟ್ಲ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ವಿಟ್ಲ ಎ ಒಕ್ಕೂಟದ ಆಶ್ರಯದಲ್ಲಿ ವಿಟ್ಲದ ಯೋಜನಾಧಿಕಾರಿ ಮೋಹನ ಇವರ ನೇತೃತ್ವದಲ್ಲಿ ನೂತನವಾಗಿ ಆರಂಭಗೊಂಡ ಜ್ಯೋತಿ ಪ್ರಗತಿ ಬಂಧು ಸ್ವಸಹಾಯ ತಂಡವನ್ನು ವಿಟ್ಲ ವಲಯದ ಅಧ್ಯಕ್ಷ ಜನಾರ್ಧನ ಪದ್ಮಶಾಲಿ ದೀಪ ಬೆಳಗಿಸಿ ಉದ್ಘಾಟಿಸಿದರು.
ವಿಟ್ಲ ವಲಯ ಮೇಲ್ವಿಚಾರಕ ರಮೇಶ ಮಾಹಿತಿ ನೀಡಿ ದಾಖಲಾತಿ ಹಸ್ತಾಂತರಿಸಿದರು. ವಿಟ್ಲ ಎ ಒಕ್ಕೂಟದ ಸೇವಾಪ್ರತಿನಿಧಿ ಮೋಹನ ಉಪಸ್ಥಿತರಿದ್ದರು. ನೂತನ ಸಂಘದ ಪ್ರಬಂಧಕರಾಗಿ ಚಂದ್ರಹಾಸ ರೈ, ಸಂಯೋಜಕರಾಗಿ ಚಂದ್ರಶೇಖರ, ಕೋಶಾಧಿಕಾರಿಯಾಗಿ ಚಂದ್ರಹಾಸ ಇವರನ್ನು ಆಯ್ಕೆ ಮಾಡಲಾಯಿತು.
