ವಿಟ್ಲ ಬೊಬ್ಬೆಕ್ಕೇರಿಯ ನಿವಾಸಿ ಕಾರು ಚಾಲಕರಾಗಿ ದುಡಿಯುತ್ತಿದ್ದ ನಾರಾಯಣ ಗೌಡ ಇವರು ಇತ್ತೀಚೆಗೆ ಹೃದಯಾಘಾತದಿಂದ ಮರಣ ಹೊಂದಿದ್ದು, ಇವರ ಪತ್ನಿಯವರಿಗೆ ವಿಟ್ಲ ಕಾರು ಚಾಲಕ ಮಾಲಕರ ಸಂಘದ ವತಿಯಿಂದ ಧನಸಹಾಯವಾಗಿ ರೂಪಾಯಿ 13000 ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷರಾದ ದಿನಕರ ಶೆಟ್ಟಿ ಮತ್ತು ಭರತ್, ಸದಸ್ಯರಾದ ಚಾರ್ಲಿ ಮತ್ತು ಜಗದೀಶ ಆಚಾರ್ಯ ಉಪಸ್ಥಿತರಿದ್ದರು.

