Published On: Sat, Jun 2nd, 2018

ಚೊಕ್ಕಬೆಟ್ಟು: ತುಂಡರಿಸಿದ ಮೃತದೇಹ ಗೋಣಿಚೀಲದಲ್ಲಿ ಪತ್ತೆ; ಕೊಲೆ ಶಂಕೆ

02062017murder

ಸುರತ್ಕಲ್: ವ್ಯಕ್ತಿಯೋರ್ವರ  ದೇಹವನ್ನು ಎರಡು ತುಂಡು ಮಾಡಿ ಗೋಣಿಚೀಲದಲ್ಲಿ ತುಂಬಿಸಿಟ್ಟ ಸ್ಥಿತಿಯಲ್ಲಿ  ಮೃತದೇಹ ಪತ್ತೆಯಾದ ಘಟನೆ ಇಲ್ಲಿನ ಚೊಕ್ಕಬೆಟ್ಟು ಸಮೀಪದ ಮೋರಿ ಬಳಿ ಶನಿವಾರ ಬೆಳಕಿಗೆ ಬಂದಿದೆ.

ಕೊಲೆಗೀಡಾದವರನ್ನು ಕೊಪ್ಪಳ ಜಿಲ್ಲೆಯ ಮರಿಯಪ್ಪ(55) ಎಂದು ಗುರುತಿಸಲಾಗಿದೆ.

ಕಳೆದ ಮಂಗಳವಾರ ಸುರಿದ ಭಾರೀ ಮಳೆಗೆ ಕಾಲು ಜಾರಿ ಬಿದ್ದು ಯಾರದೋ ಶವ ಇಲ್ಲಿನ ಮೋರಿಯಲ್ಲಿ ಸಿಲುಕಿಕೊಂಡಿರುವ ಸಾಧ್ಯತೆಗಳಿವೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿ ಸುರತ್ಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಮಂಗಳೂರು ಪೊಲೀಸ್ ಕಮಿಷನರ್ ವಿಫುಲ್ ಕುಮಾರ್, ಸುರತ್ಕಲ್ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಕೊಲೆ ಎಂದು ಶಂಕೆ ವ್ಯಕೆ ಪಡಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter