ಮಂಗಳೂರು: ಶ್ರೀ ಮೂಕಾಂಬಿಕಾ ಕ್ಲೋತಿಂಗ್ಸ್ ಬ್ರಹತ್ ಸಂಸ್ಥೆಯ ಶುಭಾರಂಭವು ಇತ್ತೀಚೆಗೆ ನಡೆಯಿತು.ಕೊಂಡೆವೂರುಶ್ರೀ ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಿದರು. ಪಂಡಿತ್ ಹೌಸ್ ಇದರ ಮಾಲಕರಾದ ಸರಿತಾ ಚಂದ್ರಹಾಸ ಅವರ ಮಾಲಕತ್ವದಲ್ಲಿ ದತ್ತ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿದೆ. ದತ್ತ ಕಾಂಪ್ಲೆಕ್ಸ್ ಮಾಲಕರಾದ ಕೆ.ಟಿ.ಸುವರ್ಣ ,ತೊಕ್ಕೊಟ್ಟು ಪೆರ್ಮನ್ನೂರು ಸಂತ ಸಬೆಸ್ಟಿಯನ್ ಧರ್ಮ ಕೇಂದ್ರದ ಪ್ರಧಾನ ಧರ್ಮಗುರು ಡಾ/ಜೋನ್ ಬ್ಯಾಪ್ಟಿಸ್ಟ್ ಸಲ್ದಾನಾ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಂಗಳೂರು ಇದರ ಉಪ ನಿರ್ದೇಶಕರಾದ ಅರವಿಂದ್ .ಡಿ, ದಕ್ಷಿಣ ಕನ್ನಡ ಜಿಲ್ಲಾ P.U.ಕಾಲೇಜಿನ ಪ್ರಾಂಶುಪಾಲ ಸಂಘದ ಅಧ್ಯಕ್ಷೆ ಎಲ್ವೀರಾ ಪಿಲೋಮಿನಾ, ದಕ್ಷಿಣ ಕನ್ನಡ ಜಿಲ್ಲಾ ಮಾತೃ ಭೂಮಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕೆ.ಟಿ.ಸುವರ್ಣ, ಉಳ್ಳಾಲ ನಗರ ಸಭೆ ಸದಸ್ಯ ರಝಿಯಾ ಇಬ್ರಾಹಿಮ್, ಬ್ಯಾಂಕ್ ಮೆನೇಜರ್ ಸಂದೀಪ್ , ಮಂಗಳೂರು ವಿಧಾನ ಸಭಾ ಕ್ಷೇತ್ರದ ಬಿ.ಜೆ.ಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಉಪಸ್ಥಿತರಿದ್ದರು.ಪ್ರವೀಣ್ ಎಸ್ ಕುಂಪಲ ಪ್ರಾರ್ಥಿಸಿ ಕಾರ್ಯಕ್ರಮ ನಿರೂಪಿಸಿದರು, ಶ್ರೀ ಮೂಕಾಂಬಿಕಾ ಕ್ಲೋತಿಂಗ್ ಮಾಲಕ ಚಂದ್ರಹಾಸ ಪಂಡಿತ್ ಹೌಸ್ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು, ಮಿತೇಶ್ ಎಮ್ ಧನ್ಯವಾದಗೈದರು
