ವಿಟ್ಲ :ಮಂಗಳೂರಿನ ಮಂಗಳ ಸ್ವಿಮ್ಮಿಂಗ್ ಕ್ಲಬ್ನಲ್ಲಿ 15 ವರ್ಷಗಳಿಂದ ಈಜು ತರಬೇತುದಾರಗಾಗಿ ಸೇವೆ ಸಲ್ಲಿಸುತ್ತಿದ್ದ ಪಂಚಲಿಂಗೇಶ್ವರ ದೇವಸ್ಥನದ ಬಳಿ ನಿವಾಸಿ ದಿ| ನಾಗೇಶ್ ರಾವ್ ರವರ ಪುತ್ರ ರವೀಶ್ ವಿ (52) ಹೃದಯಾಘಾತದಿಂದ ಶನಿವಾರ ನಿಧನಹೊಂದಿದರು. ಅವರು ಪ್ರಸ್ತತ ವಿಟ್ಲದ ಕೋಟಿ ಕೆರೆಯಲ್ಲಿ ಹಲವಾರು ಮಕ್ಕಳಿಗೆ ಉಚಿತವಾಗಿ ಈಜು ತರಬೇತಿ ನೀಡುತ್ತಿದ್ದರು .ಹಾಗೂ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅರ್ಚಕರಾಗಿ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು.ಅವರಿಗೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
