ಬಂಟ್ವಾಳ :ಮೂರ್ತೆದಾರರ ಸೇವಾ ಸಹಕಾರಿ ಸಂಘ (ನಿ.)ಶಂಭೂರು 2016-17ನೇ ಸಾಲಿನ ವಾರ್ಷಿಕ ಮಹಾಸಭೆ ಆ.13ರಂದು ಸಂಘದ ಕಛೇರಿಯಲ್ಲಿ ಸಂಘದ ಅಧ್ಯಕ್ಷ ಪುರುಷೋತ್ತಮ ಸಾಲ್ಯಾನ್ ಅಧ್ಯಕ್ಷತೆಯಲ್ಲಿ ಜರಗಿತು.

ಅಧ್ಯಕರು ಮಾತನಾಡಿ 176 ಮಂದಿ ಸದಸ್ಯರನ್ನು ಹೊಂದಿರುವ ಸಹಕಾರಿಯು ಕಳೆದ ಆರ್ಥಿಕ ವರ್ಷದಲ್ಲಿ 64ಲಕ್ಷ ವ್ಯವಹಾರ ನಡೆಸಿದೆ ಎಂದು ಇದೇ ಸಂದರ್ಭದಲ್ಲಿ ಪ್ರಕಟಿಸಿದರು.
ಈ ಸಂದರ್ಭದಲ್ಲಿ ಕೊರಗಪ್ಪ ಪೂಜಾರಿ ಕೆದ್ದೇಲ್ಗುತ್ತು, ದಿಂಡಿಕೆರೆ ಮಹಮ್ಮಾಯಿ ಸೇವಾ ಸಮಿತಿ ಮಾಜಿ ಅಧ್ಯಕ್ಷ ಚಂದಪ್ಪ ಪೂಜಾರಿ ಎಲಬೆ, ಹಿರಿಯ ಮೂರ್ತೆದಾರ ಮೋನಪ್ಪ ಪೂಜಾರಿ ಕೇದಿಗೆ, ನರಿಕೊಂಬು ಹಿ.ಪ್ರಾ.ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ರವಿ ಅಂಚನ್ ಅಬೆರೊಟ್ಟು , ಬಂಟ್ವಾಳ ತಾಲೂಕು ನೀರಾ ಮೂರ್ತೆದಾರ ತೆಂಗು ಉತ್ಪಾದಕರ ಫೆಡರೇಶನ್ (ರಿ.) ಸಂಘಟನಾ ಕಾರ್ಯದರ್ಶಿ ಶ್ರೀಶ ರಾಯಸ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಮಾಧವ ಕೆ.ಕರ್ಬೆಟ್ಟು ,ನಿರ್ದೆಶಕರುಗಳಾದ ಗಣೇಶ್ ಪೆಲ್ತಿಮಾರ್, ಅಶೋಕ ಆರ್., ರಾಜೇಶ್ ಶೇಡಿಗುರಿ, ಮೊನಪ್ಪ ಪೂಜಾರಿ ಬೊಂಡಾಲ, ನಾರಾಯಣ ಪೂಜಾರಿ ಕೇದಿಗೆ, ಕೃಷ್ಣಪ್ಪ ಪೂಜಾರಿ ಬಾಳ್ತಿಲ, ಕಾರ್ಯದರ್ಶಿ ಯೋಗಿಶ ಅಮೀನ್, ಸಿಬ್ಬಂದಿಗಳಾದ ಆಶಾ, ಭವ್ಯ ಉಪಸ್ಥಿತರಿದ್ದರು.
