ಆರೆಸ್ಸೆಸ್ ಕಾರ್ಯಕರ್ತ ಶರತ್ ಇವರ ಮೇಲೆ ಬಿ.ಸಿರೋಡಿನಲ್ಲಿ ಮಂಗಳವಾರ ನಡೆದ ಮಾರಣಾಂತಿಕ ಹಲ್ಲೆಯ ಬಗೆ ಸಾರ್ವಜನಿಕರಲ್ಲಿ ಬಾರಿ ಆಕ್ರೋಶವನ್ನು ಉಂಟು ಮಾಡಿದ್ದು ಇದಕ್ಕೆ ಸಾಕ್ಷಿಯೆಂಬಂತೆ ಬಿ.ಸಿ ರೋಡಿನಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ಕರೆ ಕೊಟ್ಟಿದ್ದ ಬೃಹತ್ ಪ್ರತಿಭಟನೆಗೆ ಭಾರಿ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರಿ ಪೊಲೀಸ್ ಇಲಾಖೆಯ ನಿಷೇದಾಜೆಗೆ ಸಡ್ಡು ಹೊಡೆದಂತಿದೆ. 
ಇನ್ನೊಂದು ವದಂತಿಯಂತೆ ಆಸ್ಪತ್ರೆಗೆ ದಾಖಲಾಗಿರುವ ಶರತ್ರವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ಆಸ್ಪತ್ರೆಯ ಮೂಲಗಳಿಂದ ಆತನ ಆರೋಗ್ಯ ಸ್ಥಿತಿಯ ಕುರಿತು ಯಾವುದೇ ಸ್ಪಷ್ಟ ಮಾಹಿತಿಗಳು ದೊರೆಯದೇ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಬಿ.ಸಿ ರೋಡಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಜಪದ ನಾಯಕರಾದ ಶೋಬಾ ಕರಂದ್ಲಾಜೆ ,ನಳಿನ್ ಕುಮಾರ್ ಕಟೀಲು,ಪದ್ಮನಾಭ ಕೊಟ್ಟಾರಿ ಸುನಿಲ್ ಕುಮಾರ್ , ರಾಜೇಶ್ ನಾಯ್ಕ ಉಳಿಪಾಡಿ ಗುತ್ತು , ನಾಗರಾಜ ಶೆಟ್ಟಿ ,ಆರೆಸ್ಸೆಸ್ ನಾಯಕರಾದ ಕಲ್ಲಡ್ಕ ಪ್ರಭಾಕರ ಭಟ್ ಭಾಗವಹಿಸಿದ್ದರು.



