ಸುದ್ದಿ 9 ಕೈಕಂಬ: ಯುವತಿಯೊಬ್ಬಳು ಕೆಲಸಕ್ಕೆಂದು ಮನೆಯಿಂದ ಹೊರಟವಳು ಗುರುಪುರ ಹೊಳೆಗೆ ಹಾರಿ ಅತ್ಮಹತ್ಯೆ ಮಾಡಿಕೊಂಡ ಘಟನೆ ಜು.9ರಂದು ಬುಧವಾರ ಬೆಳಗ್ಗೆ ನಡೆದಿದೆ. ಗುರುಪುರ ಶ್ಯಾನ್ಭೋಗರ ಕಂಪೌಂಡ್ ಬಳಿಯ ಮಾರಪ್ಪ ಪೂಜಾರಿ ಮತ್ತು ಗುಲಾಬಿ ದಂಪತಿಯ ಮೂವರು ಮಕ್ಕಳಲ್ಲಿ ಕೊನೆಯ ಮಗಳು ಮಲ್ಲಿಕಾ (17 ) ಆತ್ಮಹತ್ಯೆ ಮಾಡಿಕೊಂಡ ದುರ್ದೆವಿ.
ಮ್ರತ ದೇಹವನ್ನು ನೀರಿನಿಂದ ಮೇಲೆತ್ತಿದ್ದಾಗ
ಮ್ರತಳ ತಾಯಿ ಗುಲಾಬಿ ಮತ್ತು ಅಕ್ಕ ಮಮತ ಳನ್ನು ಸಂತ್ಯೆಸುವುದು.
ಮಲ್ಲಿಕಾ ಅನಾರೋಗ್ಯದಲ್ಲಿ ಇದ್ದು ಒಂದು ವರ್ಷದಿಂದ ಈಚೇಗೆ ಚೇತರಿಸಿಕೊಂಡಿದ್ದಳು. ಆದರು ಆಕೆಗೆ ಮನೆಯವರು ಸಂಪೂರ್ಣ ಗುಣಹೊಂದಲು ಮಂಗಳೂರಿನ ವೈಧ್ಯರಿಂದ ಮದ್ದು ಚಾಲ್ತಿಯಲ್ಲಿದ್ದು ಮಂಗಳವಾರ ರಾತ್ರಿ ಮನೆಮಂದಿಯೊಂದಿಗೆ ಮಾತನಾಡುತ್ತಿದ್ದಾಗ ಮಾನಸಿಕವಾಗಿ ನೊಂದಿದ್ದ ಆಕೆಗೆ ಮನೆಯವರು ಬುದ್ದಿ ಮಾತು ಹೇಳಿದ್ದರು .ತನ್ನ ಅನಾರೋಗ್ಯದ ಬಗ್ಗೆ ಮನದಲ್ಲೆ ನೆನೆದು ಜಿಗುಪ್ಸ್ತೆಗೊಂಡು ಅತ್ಮಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಯುವತಿ ಸ್ಥಳೀಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು ಎಂದಿನಂತೆ ಇಂದು ಕೂಡ ಕೆಲಸಕ್ಕೆ ಹೊರಟವಳು ಗುರುಪುರದಿಂದ ಬಾಡಿಗೆ ರಿಕ್ಷಾದಲ್ಲಿ ಹೋಗಿ ಕುಕ್ಕುದಕಟ್ಟೆಯಲ್ಲಿ ಇಳಿದು ನೇರ ಹೋಗಿ ಹೊಳೆಗೆ ಹಾರಿ ಪ್ರಾಣ ಕಳಕೊಂಡಿದ್ದಾಳೆ. ಈ ಜಾಗದಲ್ಲಿ ಈ ಹಿಂದೆಯು ಹಲವಾರು ಆತ್ಮಹತ್ಯೆ ಪ್ರಕರಣಗಳು ನಡೆದಿದ್ದವು.
ಮ್ರತ ದೇಹವನ್ನು ನೀರಿನಿಂದ ದಡಕ್ಕೆ ಹಾಕಿದಾಗ
ಮ್ರತ ದೇಹವನ್ನು ನದಿ ದಡಕ್ಕೆ ತಂದಾಗ
ನೀರಿನಿಂದ ಮ್ರತಳ ದೇಹವನ್ನು ಮೇಲೆತ್ತಲು ಕಾರ್ಯಚರಣೆ.

ಮ್ರತಳ ಮನೆಯವರಿಗೆ ನೆರೆಕರೆಯವರಿಂದ ಸಾಂತ್ವಾನ
ಗುರುಪುರ ಪಲ್ಗುಣಿ ನದಿಯಲ್ಲಿ ಮ್ರತದೇಹವನ್ನು ನೋಡುತ್ತಿರುವ ಜನರು. 
ಬಜ್ಪೆ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





