ವಿಟ್ಲ : ಪೆರಾಜೆ ಗ್ರಾಮದ ಮಂಜೊಟ್ಟಿ ಪರಿಶಿಷ್ಟ ಕಾಲನಿ ರಸ್ತೆ ಅಭಿವೃದ್ಧಿಗೆ ರೂ.20ಲಕ್ಷ , ಪೆರಾಜೆ ಗ್ರಾಮದ ಮಠ ರಸ್ತೆ ಅಭಿವೃದ್ಧಿಗೆ ರೂ.4.30ಲಕ್ಷ, ಜೋಗಿಬೆಟ್ಟು ಏನಾಜೆ ರಸ್ತೆ ಅಭಿವೃದ್ಧಿಗೆ ರೂ.3ಲಕ್ಷ ವೆಚ್ಚದ ಕಾಮಗಾರಿಗೆ ಕರ್ನಾಟಕ ಸರಕಾರದ ಅರಣ್ಯ ಪರಿಸರ ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾಣಿ ಜಿ.ಪಂ.ಸದಸ್ಯೆ ಮಂಜುಳಾ ಮಾಧವ ಮಾವೆ, ಮಾಣಿ ತಾ.ಪಂ.ಸದಸ್ಯೆ ಮಂಜುಳಾ ಕುಶಲ ಯಂ.ಪೆರಾಜೆ , ಪಂ.ಅಧ್ಯಕ್ಷೆ ಪುಷ್ಪಾ, ಮಾಜಿ ತಾ.ಪಂ.ಸದಸ್ಯ ಕುಶಲ ಎಂ., ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉಮೇಶ್ ಭಟ್, ಇಂಜಿನಿಯರುಗಳಾದ ಅರುಣ್ ಪ್ರಕಾಶ್, ಪ್ರೀತಂ, ಪದ್ಮರಾಜ್ ಗೌಡ, ಪಂ.ಸದಸ್ಯರಾದ ನೀಲಯ ಪೂಜಾರಿ ,ಶೀನಪ್ಪ ಪೂಜಾರಿ, ತಿಮ್ಮಪ್ಪ ಗೌಡ, ಉಮ್ಮರ್ ಬಿ., ಇಂದಿರಾ, ಉಮೇಶ್ ಎಸ್.ಪಿ, ಪಂ.ಅಭಿವೃದ್ಧಿ ಅಧಿಕಾರಿ ನವೀನ್ ರೋಬರ್ಟ್, ಪ್ರಮುಖರಾದ ಶ್ರೀಕಾಂತ್ ಆಳ್ವ ಪೆರಾಜೆ, ಎಸ್.ಉಮ್ಮರ್, ಈಶ್ವರ್ ಭಟ್ ಪಂಜಿಗುಡ್ಡೆ, ಪ್ರವೀಣ್ ಶೆಟ್ಟಿ ಕಲ್ಲಾಜೆ, ಅಝೀಜ್ ಜೋಗಿಬೆಟ್ಟು , ಗುತ್ತಿಗೆದಾರ ಉಮ್ಮರ್ ಹಾಜಿ ಕಬಕ ಮತ್ತಿತರರು ಉಪಸ್ಥಿತರಿದ್ದರು.

