ಬಂಟ್ವಾಳ: ತಾಲ್ಲೂಕಿನ ಲಯನ್ಸ್ ಕ್ಲಬ್ಬಿನ ವತಿಯಿಂದ ಲಯನ್ಸ್ ‘ಶತಮಾನೋತ್ಸವ’ ಪ್ರಯುಕ್ತ ಬಿ.ಸಿ.ರೋಡ್ ಲಯನ್ಸ್ ಸೇವಾ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ‘ಶ್ರೀ ಕೃಷ್ಣ ರಾಯಭಾರ’ ಯಕ್ಷಗಾನ ತಾಳಮದ್ದಳೆ ಕೂಟ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.

ಜಿಲ್ಲಾ ರಾಜ್ಯಪಾಲ ಎಂ.ಅರುಣ್ ಶೆಟ್ಟಿ, ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಲಕ್ಷ್ಮಣ ಕುಲಾಲ್, ಪ್ರಮುಖರಾದ ಬಿ.ಸಂಜೀವ ಶೆಟ್ಟಿ, ಕೆ.ದೇವದಾಸ ಭಂಡಾರಿ, ಕುಡ್ಪಿ ಅರವಿಂದ ಶೆಣೈ, ಕೆ.ದೇವಿಪ್ರಸಾದ್ ರಾವ್, ರೊನಾಲ್ಡ್ ಐ.ಗೋಮ್ಸ್, ಎ.ಜಿ.ಶರ್ಮ, ದೇವಿಕಾ ದಾಮೋದರ್, ಜಗದೀಶ ಎಡಪಡಿತ್ತಾಯ, ಮಧ್ವರಾಜ್ ಬಿ.ಕಲ್ಮಾಡಿ, ಶಿವಾನಂದ ಬಾಳಿಗಾ ಮತ್ತಿತರರು ಇದ್ದಾರೆ.

ಬಂಟ್ವಾಳ ತಾಲ್ಲೂಕಿನ ಲಯನ್ಸ್ ಕ್ಲಬ್ಬಿನ ವತಿಯಿಂದ ಲಯನ್ಸ್ ‘ಶತಮಾನೋತ್ಸವ’ ಪ್ರಯುಕ್ತ ಬಿ.ಸಿ.ರೋಡ್ ಲಯನ್ಸ್ ಸೇವಾ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ‘ಶ್ರೀ ಕೃಷ್ಣ ರಾಯಭಾರ’ ಯಕ್ಷಗಾನ ತಾಳಮದ್ದಳೆ ಕೂಟ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸುದರ್ಶನ ವಿ.ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.
