ಕಿನ್ನಿಗೋಳಿ: ಜೀವನ ಸುಸಾಂಗವಾಗಿ ಸಾಗಲು ಆರೋಗ್ಯ ಬಹು ಮುಖ್ಯ. ನಿಯಮಿತ ತಪಾಸಣೆಯ ಅರಿವು ಜನರಲ್ಲಿ ಸೇವಾ ಸಂಸ್ಥೆಗಳು ಮಾಡಬೇಕಾಗಿದೆ. ದಾಮಸ್ ಕಟ್ಟೆ ಕಿರೆಂ ಚರ್ಚ್ ಪ್ರಧಾನ ಧರ್ಮಗುರು ರೆ| ಫಾ| ಪೌಲ್ ಪಿಂಟೋ ಹೇಳಿದರು.
ಮಂಗಳವಾರ ದಾಮಸ್ ಕಟ್ಟೆ ಕಿರೆಂ ಚರ್ಚ್ ಸಭಾಂಗಣದಲ್ಲಿ ವೆಸ್ಟರ್ನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ, ಡಿವೈನ್ ವರ್ಲ್ಡ್ ಚಾರಿಟೇಬಲ್ ಟ್ರಸ್ಟ್, ಕೆಥೋಲಿಕ್ ಸಭಾ ಕಿರೆಂ ಹಾಗೂ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಏಳಿಂಜೆ ಐಕಳ ಸಂಸ್ಥೆಗಳ ಜಂಟೀ ಆಶ್ರಯದಲ್ಲಿ ಅತ್ತಾವರ ಮಂಗಳೂರು ಕೆ.ಎಂ.ಸಿ ಆಸ್ಪತ್ರೆಯ ನುರಿತ ವೈದ್ಯರಿಂದ ಭಾನುವಾರ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ವೆಸ್ಟರ್ನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಡಿವೈನ್ ವರ್ಲ್ಡ್ ಚಾರಿಟೇಬಲ್ ಟ್ರಸ್ಟ್ನ ಆಡಳಿತ ನಿರ್ದೇಶಕ ವಾಲ್ಟರ್ ಸ್ಟೀಫನ್ ಮೆಂಡಿಸ್, ಕಿರೆಂ ಕೆಥೋಲಿಕ್ ಸಭಾ ಅಧ್ಯಕ್ಷ ಜೇಮ್ಸ್ ಲೋಬೋ ಕಾರ್ಯದರ್ಶಿ ಪ್ಲಾವಿಯಾ ಸುವಾರಿಸ್, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಏಳಿಂಜೆ ಐಕಳ ಒಕ್ಕೂಟದ ಪದಾಧಿಕಾರಿ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.
ಸೆವರಿನ್ ಲೋಬೊ ಸ್ವಾಗತಿಸಿ, ಸೈಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಸ್ವರ್ಣ ವಂದಿಸಿದರು. ಪ್ಲೊರೆನ್ಸ್ ಮೆಂಡಿಸ್ ಕಾರ್ಯಕ್ರಮ ನಿರೂಪಿಸಿದರು.
