ಕೈಕಂಬ: ಗಂಜಿಮಠದಲ್ಲಿ ನಡೆದ 21ನೇ ವರ್ಷದ ಸಾರ್ವಜನಿಕ ಮೊಸರುಕುಡಿಕೆಯ ಅಂಗವಾಗಿ ಸಾರ್ವಜನಿಕರ ಸೇವೆಗೆಂದು ಸಮಿತಿಯ ವತಿಯಿಂದ ಅಂಬ್ಯುಲೆನ್ಸ್ ಸೇವೆಗೆ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು. ಗಂಜಿಮಠ ವೈದ್ಯಾಧಿಕಾರಿ ಡಾ. ಚೇತನ್ ರಾಜ್ ಚಾಲನೆ ನೀಡಿದರು.

ಗಂಜಿಮಠದಿಂದ ಎಡಪದವು ತನಕ ಹಲವಾರು ಅಪಘಾತ ನಡೆಯುತ್ತಿದ್ದು, ಅಪಘಾತಕ್ಕೆ ತುತ್ತಾದವರನ್ನು ಆಸ್ಪತ್ರೆಗೆ ಸೇರಿಸಲು ವಿಳಂಬವಾಗುವುದರ ಹಿನ್ನೆಲೆಯಲ್ಲಿ ಮೊಸರುಕುಡಿಕೆ ಉತ್ಸವ ಸಮಿತಿಯ ವತಿಯಿಂದ ಅಂಬ್ಯಲೆನ್ಸ್ ಒದಗಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಶಾಸಕ ಮೊಯ್ದೀನ್ ಬಾವಾ, ಬಿಜೆಪಿ ಮುಖಂಡ ರಾಜೇಶ್ ನಾೈಕ್, ಚಂದ್ರಹಾಸ ಶೆಟ್ಟಿ ನಾರಳ, ಕೃಷ್ಣ ಅಮೀನ್, ರವಿ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.
ಪೊಟೋ:ಅಂಬ್ಯುಲೆನ್ಸ್ ಸೇವೆಗೆ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು
