ಕೈಕಂಬ:ಆಟಿ ತಿಂಗಳಿಗೆ ಸಂಭಂದಿಸಿದ ಆಚರಣೆಗಳು ಕೇವಲ ನಂಬಿಕೆಗಳಲ್ಲ ಅವುಗಳಲಲ್ಲಿ ಪ್ರಾಕೃತಿಕ , ವೈಜ್ಙಾ ನಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳು ಕೂಡ ಅಡಕವಾಗಿದೆ.ಇವುಗಳನ್ನು ಹಿಂದಿನ ಪೀಳಿಗೆಗೆ ಪರಿಚಯಿಸುವ ಆಟಿಯ ಕೂಟಗಳು ಆಚರಣೆಯ ರೂಪ ಪಡೆದಿರುವುದು ಬಹಳ ಪ್ರಸ್ತುತ ಎಂದು ರಾಜ್ಯ ಬಿಜೆಪಿ ಹಿಂದುಳಿದವರ್ಗಗಳ ಮೋರ್ಚದ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ಹೇಳಿದರು. ಅವರು ಜು.24ರಂದು ಭಾನುವಾರ ವಾಮಂಜೂರು ಬ್ರಹ್ಮ ಶ್ರೀ ನಾರಾಯಣಗುರು ಬಿಲ್ಲವ ಸಂಘದಲ್ಲಿ ಆಟಿಡೊಂಜಿ ಕೂಟ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಬಿಲ್ಲವ ಏಕೀಕರಣದ ಅಧ್ಯಕ್ಷ ರವಿ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಮಕ್ಕಳಿಂದ ಆಟಿ ಆಚರಣೆಯ ಸಾಂಸ್ಕøತಿಕ ಕಾರ್ಯಕ್ರಮ
ಆಟಿ ಆಚರಣೆಯ ಕಾರ್ಯಕ್ರಮದಲ್ಲಿ ಸ್ಥಳೀಯ ಮಕ್ಕಳು ಆಟಿ ತಿಂಗಳಲ್ಲಿ ಬರುವ ನಾನಾ ರೀತಿಯ ಸಂಸ್ಕøತಿಕ ಸಸನ್ನಿವೇಷಗಳನ್ನು ಪ್ರಸ್ತುತಪಡಿಸಿದರು. ಆಟಿಕಲೆಂಜ, ಹಾಡುಗಳು, ಭರತನಾಟ್ಯ, ನೃತ್ಯ , ಕಬಿತೆಗಳು, ಒಗಟುಗಳು ಪ್ರಹಸನಗಳನ್ನು ಪ್ರಸ್ತುತಪಡಿಸಿ ಎಲ್ಲರ ಗಮನ ಸೆಲೆದರು.
ಮಹಿಳೆಯರಿಂದ 48 ಬಗೆ ಬಗೆಯ ಪಲ್ಯ ಪದಾರ್ಥಗಳು
ಮಹಿಳೆಯರು ಆಟಿಗೆ ಸಂಭಂದಿಸಿದ ಪ್ರಾಕೃತಿಕ ಹಾಗೂ ಜನಪದೀಯ ಹಿನ್ನೆಲೆಯ ಸುಮಾರು 48 ಬಗೆ ಬಗೆಯ ಪಲ್ಯ ಪದಾರ್ಥಗಳು ತಿಂಡಿ ತಿನಸುಗಳನ್ನು ತಯಾರಿಸಿ ತಂದು ಸೇರಿರುವ ಸಮಸ್ತರಿಗೂ ಆಟಿಯ ವೈವಿದ್ಯವನ್ನು ಸವಿಯುವ ಅವಕಾಶ ಮಾಡಿ ಕೊಟ್ಟರು. ಅವುಗಳಲ್ಲಿ ಅವುಗಳಲ್ಲಿ ಮೆಂತೆಗಂಜಿ, ಕನಿಲೆಪದೆಂಗಿ, ಕುಕ್ಕುಸಾರ್, ಅರ್ತಿಕಾಯಿ ಚಟ್ನಿ, ಕುಡುತ ಚಟ್ನಿ, ನೀರ್ಡ್ ಪಾಡ್ದಿನ ಕುಕ್ಕ್, ತೇವ್ ತೇಟ್ಲ,ಪೆಜಕಾಯಿ ಚಟ್ನಿ, ಕನಿಲೆ ಪದೆಂಗಿ ತಜಂಕ್, ತೇವ್ಕಜಿಪು, ಲಾಂಬುದ ಕಜಿಪು, ಸಂಪಾಯಿ ಇರೆತ ಗಟ್ಟಿ, ತೆಕ್ಕರೆದ ಗಟ್ಟಿ, ಸಾರ್ನೆಡ್ಯೆ ನೀರ್ಪುಂಡಿ ಮೂಡೆ, ಸೇಮೆದಡ್ಯ ತಾರಾಯಿದ ಪೇರ್ ಮುಂತಾದ ಬಗೆಬಗೆಯ ಸ್ಪೆಸಲ್ಟಂಗಳಿದ್ದವು.
ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘದ ಅಧ್ಯಕ್ಷ ಮೋಹನ್ದಾಸ್ ಬಂಗೇರಾ, ಮಾಜಿ ಅಧ್ಯಕ್ಷ ರಾಜೀವ ಅಪ್ಪನಬೊಟ್ಟು , ಪಿ ಡ
ಬ್ಲಯೋ ಗುತ್ತಿಗೆದಾರ ಶ್ರೀನಿವಾಸ ಮಲ್ಲೂರು, ಪಿ ಡಬ್ಲಯೋ ಗುತ್ತಗೆದಾರ ಶೇಖರ, ಅರ್ಚಕ ಗಣೇಶ್ ಬಂಗೇರ, ವಾಮಂಜೂರು ವಲಯ ಕಾಂಗ್ರೇಸ್ ಅಧ್ಯಕ್ಷ ಸದಾಶಿವ ಅಮೀನ್, ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಜಯಂತಿ ಮತ್ತಿತರರು ಉಪಸ್ಥಿತರಿದ್ದರು. ಮಧುರ ಮತ್ತು ಬಳಗದವರಿಂದ ಪ್ರಾರ್ಥನೆ ಹಾಡಿದರು ವನೀತ ಸ್ವಾಗತಿಸಿ, ಜನಾರ್ಧನ ಸುವರ್ಣ ನಿರೂಪಿಸಿ ಕಾಂತಪ್ಪ ಪೂಜಾರಿ ವಂದಿಸಿದರು.


































