ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ-ದಾಸಕೋಡಿ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಚೆಗೆ ಕಾಣಿಸಿಕೊಂಡಿದ್ದ ಬೃಹತ್ ಗಾತ್ರದ ಹೊಂಡಗಳಿಂದ ಉಂಟಾಗುತ್ತಿರುವ ವಾಹನ ಪರದಾಟ ಬಗ್ಗೆ ಈಚೆಗೆ ಪ್ರಕಟಿಸಿದ್ದ ಸಚಿತ್ರ ಸುದ್ದಿಗೆ ಸ್ಪಂದಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಗುತ್ತಿಗೆದಾರರ ಮೂಲಕ ತೇಪೆ ಡಾಂಬರೀಕರಣ ಮತ್ತು ಜೆಸಿಬಿ ಮೂಲಕ ಚರಂಡಿ ಹೂಳೆತ್ತುವ ಕಾಮಗಾರಿ ನಡೆಸಿದೆ. 
