ವಿಟ್ಲ, ಅಳಿಕೆ ಗ್ರಾಮದ ಎರುಂಬು ಮೂಡಾಯಿಬೆಟ್ಟು ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಜೀರ್ಣೋದ್ಧಾರದ ಪೂರ್ವಭಾವಿ ಕಾರ್ಯಕ್ರಮದ ಬಾಲಾಲಯ ಪ್ರತಿಷ್ಠೆ ಕಾರ್ಯಕ್ರಮವು ಫೆ.21 ರಂದು ಭಾನುವಾರ ಜೀರ್ಣೋದ್ಧಾರ ಸಮಿತಿಯ ನೇತೃತ್ವದಲ್ಲಿ ನಡೆಯಲಿದೆ. ಫೆ. 20 ರಂದು ಶನಿವಾರ ಸ್ಥಳ ಶುದ್ಧಿ ಪುಣ್ಯಾಹ ಪಂಚಗವ್ಯ, ನವದುರ್ಗಾಹವನ, ಸುದರ್ಶನ ಹೋಮ, ಹಾಗೂ ಉಚ್ಛಾಟನೆ ಫೆ. 21 ರಂದು ಗಣಪತಿ ಹೋಮ, ಅನುಜ್ಞಾ ಕಲಶ, ನಿಧಿ ಕುಂಬ ಸಮರ್ಪಣೆ ಮತ್ತು ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಬಾಲಾಲಯ ಪ್ರತಿಷ್ಠೆಯು ನಡೆಯಲಿದೆ.
