ಕೈಕಂಬ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನದಲ್ಲಿ ಶ್ರೀ ವಿನಾಯಕ ಭಜನಾ ಮಂಡಳಿ ಇದರ 9ನೇ ವರ್ಷದ ಏಕಾಹ ಭಜನೋತ್ಸವಕ್ಕೆ ಡಿ. 5ರಂದು ಶನಿವಾರ ದೇವಳದ ಅರ್ಚಕ ಶಶಿಧರ ಭಟ್ ಚಾಲನೆ ನೀಡಿದರು.
ಬೆಳಗ್ಗೆ 6ಗಂಟೆಗೆ ಗಣಹೋಮ, ಮಹಾ ಪೂಜೆ ಬಳಿಕ ಸೂರ್ಯೋದಯದಿಂದ ಮರುದಿನ ಸೂರ್ಯೋದಯದವರೆಗೆ ನಿರಂತರ 24 ಗಂಟೆಗಳ ಕಾಲ ಭಜನಾ ಸಂಕೀರ್ತನೆಯು ಜರಗಳಿರುವುದು. ಅಮ್ಮುಂಜೆ ಶ್ರೀ ವಿನಾಯಕ ಭಜನಾ ಮಂಡಳಿಯವರಿಂದ ಪ್ರಾರಂಭಗೊಂಡು ನಾನಾ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ನಾಗೇಶ್ ರಾವ್, ಹರೀಶ್ ರಾವ್, ಬೆಂಜನಪದವು ಭದ್ರಕಾಳಿ ದೇವಸ್ಥಾನದ (ದೇವಿ ಪಾತ್ರಿ) ರಮೇಶ, ಸೋಮಶೇಖರ ಶೆಟ್ಟಿ ಕೀನ್ಯ, ವಿಜಯ ಸುವರ್ಣ ಪೊಳಲಿ ( ರೇಖಿ ತಜ್ಙರು ಮಾದುಕೋಡಿ) ಮತ್ತಿತರರು ಪಾಲ್ಗೊಂಡಿದ್ದರು.













