ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇ.ಧ.ಗ್ರಾ.ಯೋಜನೆ ವತಿಯಿಂದ ನಡೆಯುತ್ತಿರುವ ಮದ್ಯವರ್ಜನ ಶಿಬಿರಗಳ ನವಜೀವನ ಸಮಿತಿ ಸದಸ್ಯರುಗಳಿಗೆ ಪ್ರೇರಣಾ ಶಿಬಿರ ಬಂಟ್ವಾಳ ತಾಲೂಕು ಸಿದ್ಧಕಟ್ಟೆ ವಲಯದ ಜನಜಾಗೃತಿ ವೇದಿಕೆ ವತಿಯಿಂದ ಕೊಯಿಲ ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.
ದೇವಸ್ಥಾನದ ಆಡಳಿತ ಮೊಕ್ತೇಸರ ಪದ್ಮರಾಜ್ ಬಲ್ಲಾಳ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಂಟ್ವಾಳ ತಾಲೂಕು ಯೋಜನಾ„ಕಾರಿ ಸುನೀತಾ ನಾಯಕ್, ಸಿದ್ಧಕಟ್ಟೆ ವಲಯ ಒಕ್ಕೂಟಗಳ ಕೇಂದ್ರ ಸಮಿತಿ ಅಧ್ಯಕ್ಷ ಚಂದಪ್ಪ ಮೂಲ್ಯ , ಸದಸ್ಯ ಅರ್ಕಕೀರ್ತಿ ಇಂದ್ರ ಸಿದ್ಧಕಟ್ಟೆ, ಕೊಯಿಲ ಸ.ಪ್ರೌ.ಶಾಲಾ ಶಿಕ್ಷಕ ಮಹೇಶ್ ಕುಮಾರ್, ಕಿರಣ್ ಹೆಗ್ಡೆ, ದೇವಪ್ಪ ಕುಲಾಲ್, ಸಚಿನ್ ಪಡ್ರಾಯಿ, ಯೋಜನೆಯ ಸೇವಾ ಪ್ರತಿನಿ„ಗಳು, ಒಕ್ಕೂಟಗಳ ಪದಾ„ಕಾರಿಗಳು ಉಪಸ್ಥಿತರಿದ್ದರು.
ಸಿದ್ಧಕಟ್ಟೆ ವಲಯ ಮೇಲ್ವಿಚಾರಕ ಗಂಗಾಧರ ಅವರು ಸ್ವಾಗತಿಸಿದರು. ವಲಯ ಜನಜಾಗೃತಿ ಸಮಿತಿ ಅಧ್ಯಕ್ಷ ಜಗದೀಶ ಕೊಯಿಲ ಅವರು ಪ್ರಸ್ತಾವಿಸಿದರು. ಸದಾನಂದ ಶೀತಲ್ ವಂದಿಸಿದರು.
