ಬಂಟ್ವಾಳ: ಏಲಿಯನಡುಗೊಡು ಗ್ರಾಮದ ಪೂಂಜಾ ಕುರುಡಾಡಿಯಿಂದ ಒಳಗುಡ್ಡೆವರೆಗೆ ಶಾಸಕರ ಅನುದಾನದಿಂದ ನೂತನವಾಗಿ ನಿರ್ಮಾಣಗೊಂಡ ರಸ್ತೆಯನ್ನು ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.
ಈ ಸಂದರ್ಭ ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷ ದಿನೇಶ್, ಉಪಾಧ್ಯಕ್ಷೆ ವಿನಯದೇಜಪ್ಪ ಪೂಜಾರಿ, ಪ್ರಮುಖರಾದ ಪಿಯೂಸ್ ಎಲ್ .ರೊಡ್ರಿಗ್ರಸ್, ಮಾಯಿಲಪ್ಪ ಸಾಲ್ಯಾನ್, ಪ್ರಭಾಕರ ಪ್ರಭು, ಬಿ.ಎಚ್.ಖಾದರ್, ದೇವಪ್ಪ ಕರ್ಕೇರ, ಉಮೇಶ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಸುದೀಂದ್ರ ಶೆಟ್ಟಿ, ಎಂ.ಎಚ್, ಉಸ್ಮಾನ್, ಜನಾರ್ಧನ ಬಂಗೇರ, ಹರಿಣಿ ಪೂಜಾರಿ, ಮಹಾವೀರ ಜೈನ್,ಸಹಾಯಕ ಇಂಜಿನಿಯರ್ ನರೇಂದ್ರ ಬಾಬು ಮತ್ತು ಕಿರಿಯ ಎಂಜಿನಿಯರ್ ಜಗದೀಶ್ಚಂದ್ರ ಉಪಸ್ಥಿತರಿದ್ದರು.
