ಮೂಡುಬಿದರೆ: ದಿ.ಜಯಪ್ರಕಾಶ್ ದೇವಾಡಿಗ ನಿಧಿಯಿಂದ ತಲಾ 3 ಸಾವಿರದಂತೆ ಮೂರು ಕುಟುಂಬಗಳಿಗೆ ಸಹಾಯಧನ ಹಾಗೂ ಕಾನ್ಸರ್ನಿಂದ ಬಳಲುತ್ತಿರುವ ಮೂಡುಬಿದರೆ ಬೆಟ್ಕೇರಿ ನಿವಾಸಿ ಲೋಕೇಶ ದೇವಾಡಿಗ ಅವರಿಗೆ 2 ಸಾವಿರ ರೂ.ಗಳ ಸಹಾಯಧನವನ್ನು ಹಸ್ತಾಂತರಿಸಲಾಯಿತು.
ಯುವಕಮಂಡಲದ ಅಧ್ಯಕ್ಷ, ಗ್ರಾ.ಪಂ ಸದಸ್ಯ ರಮೇಶ್ ಎಸ್.ಶೆಟ್ಟಿ, ಗ್ರಾ.ಪಂ ಸದಸ್ಯರಾದ ಪ್ರಮೀಳಾ.ಜೆ, ವಿದ್ಯಾ.ಡಿ ಹೆಗ್ಡೆ, ಮಾಜಿ ಸದಸ್ಯ ಮಹಮ್ಮದ್ ಹಾರಿಸ್, ಪದಾಧಿಕಾರಿಗಳಾದ ದಿನೇಶ್ ಶೆಟ್ಟಿ, ಸುರೇಶ್ ಪೂಜಾರಿ, ಸಚಿನ್ ಆಚಾರ್ಯ, ಶಿಕ್ಷಕ ಜಯ.ಬಿ, ಪ್ರಜ್ಞಾ ಯುವತಿ ಮಂಡಲ ಅಧ್ಯಕ್ಷೆ ಮೋಹಿನಿ ಮೊದಲಾದವರು ಉಪಸ್ಥಿತರಿದ್ದರು.

