ಬಂಟ್ವಾಳ:   ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ), ಬಂಟ್ವಾಳ ವಲಯ ಸಮಿತಿ ವತಿಯಿಂದ ದಿನಾಂಕ   ಸೆ. 27 ರಂದು ಆದಿತ್ಯವಾರ ಅಪರಾಹ್ನ 3ಗಂಟೆಗೆ ಮೊಡಂಕಾಪುಅನುಗ್ರಹ ಸಭಾಭವನದಲ್ಲಿ ಹಿಂದುಳಿದವರ್ಗ ಮತ್ತುಅಲ್ಪ ಸಂಖ್ಯಾತರ ಮಾಹಿತಿಕಾರ್ಯಗಾರಜರುಗಿತು. ಪ್ರಾರ್ಥನೆಯೊಂದಿಗೆಆರಂಭವಾದಕಾರ್ಯಕ್ರಮದಲ್ಲಿದಕ್ಷಿಣಕನ್ನಡಜಿಲ್ಲಾ ಹಿಂದುಳಿದ ವರ್ಗ ಮತ್ತುಅಲ್ಪ ಸಂಖ್ಯಾತಇಲಾಖೆಯ ಅಧಿಕಾರಿಗಳಾದ ಶ್ರೀಯುತ ಎಸ್. ಸೋಮಪ್ಪ, ಶ್ರೀಯುತ ಅಬ್ದುಲ್‍ಖಾದರ್ ಮತ್ತು ಶ್ರೀಯುತ ರಾಮಮೂರ್ತಿ ಮಯ್ಯಇವರು ಇಲಾಖಾ ಸೌಲಭ್ಯಗಳ ಕುರಿತು ಸವಿಸ್ತಾರ ಮಾಹಿತಿ ನೀಡಿದರು.

JNSN0651

ಸಭಾಕಾರ್ಯಕ್ರಮದಲ್ಲಿಕರ್ನಾಟಕರಾಜ್ಯ ವಿಧಾನ ಮಂಡಳದ ಹಿಂದುಳಿದ ವರ್ಗ ಮತ್ತುಅಲ್ಪ ಸಂಖ್ಯಾತಕಲ್ಯಾಣ ಸಮಿತಿಯಅಧ್ಯಕ್ಷರೂ ಹಾಗೂ ಮಂಗಳೂರು ದಕ್ಷಿಣಕ್ಷೇತ್ರದ ಶಾಸಕರೂಆಗಿರುವಂತಹಾ ಮಾನ್ಯ ಶ್ರೀ ಜೆ.ಆರ್.ಲೋಬೊರವರನ್ನು ಸನ್ಮಾನಿಸಲಾಯಿತು.ಶ್ರೀಯುತ ಜೆ.ಆರ್.ಲೋಬೊರವರು ಸಂಯೋಜಕರನ್ನುಅಭಿನಂದಿಸುತ್ತಾಸಾರ್ವಜನಿಕರು ಇಲಾಖಾ ವತಿಯಿಂದದೊರೆಯುವ ಸೌಲಭ್ಯಗಳನ್ನು ಪಡೆಯುವರೇ ಮುಂದೆ ಬರಬೇಕಾಗಿಕರೆ ನೀಡಿದರು.
ವೇದಿಕೆಯಲ್ಲಿ ಮೊಡಂಕಾಪುಚರ್ಚಿನ ಧರ್ಮಗುರುಗಳಾದ ಅತೀ ವಂದನೀಯಮ್ಯಾಕ್ಸಿಮ್‍ನೊರೊನ್ಹಾ, ಬುಡಾಅಧ್ಯಕ್ಷರಾದ ಶ್ರಿ ಪಿಯೂಸ್‍ರೊಡ್ರಿಗಸ್, ತಾ. ಪ. ಸಾಮಾಜಿಕ ಸ್ಥಾಯಿ ಸಮಿತಿಅಧ್ಯಕ್ಷೆ ಶ್ರೀಮತಿ ಐಡಾ ಸುರೇಶ್, ತಾ.ಪ. ಕಾರ್ಯನಿರ್ವಾಹಣಾಧಿಕಾರಿ ಶ್ರೀ ಸಿಪ್ರಿಯಾನ್ ಮಿರಾಂದಾ, ಕಥೊಲಿಕ್ ಸಭೆಯ ವಲಯಅಧ್ಯಕ್ಷೆಶ್ರೀಮತಿ ಅನಿತಾ ನೊರೊನ್ಹಾಬಂಟ್ವಾಳ ವಲಯ ಚರ್ಚುಗಳ ಧರ್ಮಗುರುಗಳು, ಮತ್ತುಕಥೊಲಿಕ್ ಸಭೆಯಕೇಂದ್ರಿಯ ಪಧಾಧಿಕಾರಿಗಳು ಉಪಸ್ಥಿತರಿದ್ದರು.
ವಂದನೀಯಮ್ಯಾಕ್ಸಿಮ್ ನೊರೊನ್ಹಾರವರ ಪ್ರಾಸ್ತವಿಕಾ ನುಡಿಗಳ ಪ್ರಾರಂಭದೊಂದಿಗೆಉಪಾಧ್ಯಕ್ಷ ಶ್ರೀ ಸ್ಟೇನಿ ಲೋಬೊರವರು ಸ್ವಾಗತಿಸಿ, ಶ್ರಿ ನೊರ್ಬಟ್ ಮಥಾಯಸ್‍ರವರು ವಂದಾನಾರ್ಪಣೆಗೈದರು. ತುಂಬಿ ತುಳುಕಿದ ಸಭಾಭವನದಲ್ಲಿ ಈ ಕಾರ್ಯಕ್ರಮವನ್ನು ಸಮುದಾಯಅಭಿವೃದ್ಧಿ ಸಂಚಾಲಕರಾದ ಶ್ರಿಯುತ ಹೆರಾಲ್ಡ್ ಡಿ’ಸೋಜರವರು ನಿರ್ವಾಹಿಸಿದರು.
ರಾಷ್ಟ್ರಗೀತೆಯೊಂದಿಗೆಕಾರ್ಯಕ್ರಮವು ಸಂಪನ್ನಗೊಂಡಿತು.

By suddi9

Leave a Reply

Your email address will not be published. Required fields are marked *