ಕೈಕಂಬ:ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಶ್ರೀಕೃಷ್ಣನಿಗೆ ತುಳಸಿ ಅರ್ಚನೆ ಹಾಗೂ ಶ್ರೀ ಕೃಷ್ಣನಿಗೆ ಪಂಚಾಮೃತ ಅಭಿಷೇಕ ನಡೆಯಿತು.ರಾಮಕೃಷ್ಣ ತಪೋವನದ ಸ್ವಾಮಿವಿವೇಕ ಚೈತನ್ಯಾಂದ ಅವರು ಕಲ್ಲುಸಕ್ಕರೆ, ಮೊಸರು ,ಹಾಲು,ತುಪ್ಪ ಸೀಯಾಲ ಗಂಗಾಜಲ ಸಹಸ್ರ ನಾಮದೊಂದಿಗೆ ಪಾರಾಯಣಮಾಡಿ ಶ್ರೀ ಕ್ರಷ್ಣ ನನ್ನು ಜೋಕಾಲಿಯಲ್ಲಿ ತೂಗಿ ಪೂಜೆ ನೆರವೇರಿಸಿದರು. ಭಕ್ತರು ತುಳಸೀ ಅರ್ಚನೆಯಲ್ಲಿ ಪಾಲ್ಗೊಂಡಿದ್ದರು. ನಂತರ ಮಹಾಪೂಜೆ, ಅನ್ನ ಪ್ರಸಾದ ನಡೆಯಿತು.













