ಮೂಡುಬಿದಿರೆ ವಲಯದ ಸಿಐಟಿಯು ಸಹಿತ ವಿವಿಧ ಕಾಮರ್ಿಕ ಸಂಘಟನೆಗಳು ಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆ ನಡೆಸಿದವು.
ಬಳಿಕ ಬಸ್ನಿಲ್ದಾಣ ಬಳಿ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಉಪಾಧ್ಯಕ್ಷೆ ರಮಣಿ ರಮಣಿ ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ನೀತಿ ಕಾರ್ಮಿಕರಿಗೆ ಮರಣ ಶಾಸನವಾಗಲಿದೆ.

ಬೀಡಿ ಕಟ್ಟುವುದರಿಂದ ಮತ್ತು ಸೇದುವುದರಿಂದ ಕ್ಯಾನ್ಸರ್ ಬರುತ್ತದೆ ಎಂಬ ನೆಪವೊಡ್ಡಿ ಬೀಡಿ ಉದ್ಯಮವನ್ನು ಸರಕಾರ ಬಂದ್ ಮಾಡುವುದಾದರೆ ಸಾವಿರಾರು ಕುಟುಂಬಗಳು ಬೀದಿ ಪಾಲಾಗಿ, ಹೆಣ್ಮಕ್ಕಳ ಅತ್ಯಾಚಾರ, ಹಿಂಸೆಗೆ ಕಾರಣವಾಗುತ್ತಿರುವ ಮದ್ಯಪಾನವನ್ನು ನಿಷೇಧಿಸಲಿ ಎಂದು ಸರಕಾರಕ್ಕೆ ಸವಾಲು ಹಾಕಿದರು. ಕಾರ್ಮಿಕ ಸಂಘಟನೆಯ ಪ್ರಮುಖರಾದ ಶಂಕರ, ರಾಧಾ, ಸೀತಾರಾಮ ಶೆಟ್ಟಿ, ವಿಶ್ವನಾಥ ಉಪಸ್ಥಿತರಿದ್ದರು.
