ಬಂಟ್ವಾಳ: ಕೆಪಿಸಿಸಿ ಕಾರ್ಯದರ್ಶಿ ಅಶ್ವನಿ ಕುಮಾರ್ ರೈ ತನ್ನ ಅಪಾರ ಬೆಂಬಲಿಗರೊಂದಿಗೆ ಭಾನುವಾರ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಶೋ ಮತ್ತು ಮನೆ ಭೇಟಿಯ ಮೂಲಕ ಮತ ಪ್ರಚಾರ ನಡೆಸಿದರು.

ತುಂಬೆ, ರಾಮಲ್ಕಟ್ಟೆ, ಕೈಕಂಬ, ಸಜೀಪಮೂಡ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಮತದಾರರನ್ನು ಭೇಟಿ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿಗೆ ಮತ ನೀಡುವಂತೆ ವಿನಂತಿಸಿಕೊಂಡರು. ಈ ಸಂದರ್ಭ ಪುರಸಭಾ ಸದಸ್ಯರಾದ ಸದಾಶಿವ ಬಂಗೇರಾ, ಮಹಮ್ಮದ್ ನಂದರಬೆಟ್ಟು, ತುಂಬೆ ಗ್ರಾಮಪಂಚಾಯತ್ ಅಧ್ಯಕ್ಷ ಮಹಮ್ಮದ್ ವಳವೂರು, ಪಕ್ಷ ಪ್ರಮುಖರಾದ ಅರುಣ್ ರೋಶನ್ ಡಿಸೋಜಾ, ಸ್ಟೀವನ್ ಮೊದಲಾದವರು ಹಾಜರಿದ್ದರು.
