ಮೂಡುಬಿದಿರೆ: ಸರ್ಕಾರ ಜಾತಿ ಗಣತಿ ಮಾಡಲು ಹೊರಟಿರುವುದರ ಹಿಂದಿನ ಉದ್ದೇಶವೇನು?. ಜಾತಿ ಗಣತಿಯಲ್ಲಿ ಜಾತಿಗಳ ಸಂಖ್ಯೆಯನ್ನು ಏರಿಸುವ ಅಧಿಕಾರ ಸರ್ಕಾರಕ್ಕೆ ಇದೆಯೇ? ಎನ್ನುವ ಕುರಿತು ಜನರಿಗೆ ಉತ್ತರ ಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್ ವೀರಯ್ಯ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಆದಿ ದ್ರಾವಿಡ ಮಹಾಮಂಡಲದ ಮೂಡುಬಿದಿರೆ ಶಾಖೆಯ ವತಿಯಿಂದ ಭಾನುವಾರ ನಡೆದ ಜಾತಿಗಣತಿ ವಿಚಾರ ಸಂಕಿರಣದಲ್ಲಿ ಈ ಕುರಿತು ಮಾತನಾಡಿದರು.
