ಸುದ್ದಿ9 ಬಂಟ್ವಾಳ; ಕಳೆದ ಎರಡು ತಿಂಗಳುಗಳಿಂದ ವಾಸಿಯಾಗದ ಕಾಯಿಲೆಯಿಂದ ಬಳಲುತ್ತಿದ್ದ ಪರೀಕ್ಷೆಗೆ ಹಾಜರಾಗಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಮನನೊಂದ ಕಾಲೇಜು ವಿದ್ಯಾಥರ್ಿನಿಯೋರ್ವಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ವಾಮದಪದವು ಸಮೀಪದ ಬುಡೋಳಿಯ ದಂಡೆಗೋಳಿ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಇಲ್ಲಿನ ದಿ.ರವಿರಾಜ ಶೆಟ್ಟಿ ಯವರ ಪುತ್ರಿ ದೀಪಿಕಾ (19) ಆತ್ಮಹತ್ಯೆ ಮಾಡಿಕೊಂಡವಳು. ಈಕೆ ವಾಮದಪದವು ಪದವಿ ಕಾಲೇಜಿನ ಅಂತಿಮ ಡಿಗ್ರಿ ವಿದ್ಯಾಥರ್ಿನಿಯಾಗಿದ್ದಳು. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡಿದ್ದ ಆತ್ಮಹತ್ಯೆಗೆ ಶರಣಾಗಿದ್ದಾಳೆ, ಈಕೆಯ ತಾಯಿ ಶಾರದಾ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

.

 

By suddi9

Leave a Reply

Your email address will not be published. Required fields are marked *