ಸುದ್ದಿ 9 ಕೈಕಂಬ ;ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಎ.4ರಂದು ಶುಕ್ರವಾರ ಶ್ರೀಕ್ಷೇತ್ರ ಪೊಳಲಿಗ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ದೇವಳದ ಪ್ರಧಾನ ಅರ್ಚಕ ಮಾಧವ ಭಟ್ ಹಾಗೂ ಅರ್ಚಕರಾದ ನಾರಾಯಣ ಭಟ್ ,ಪದ್ಮನಾಭಭಟ್ ಪ್ರಸಾದ ನೀಡಿದರು. ಬಳಿಕ ಪೊಳಲಿಯ ರಥಬೀದಿಯಲ್ಲಿ ಮತ ಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಪುರುಷ ಸಾಲಿಯಾನ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ವೇಂಕಟೇಶ್ ನಾವಡ, ಕರಿಯಂಗಳ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಯಶವಂತಕೋಟ್ಯಾನ್, ಪಕ್ಷದ ಯಶೋಧರ ಕಲ್ಕುಟ ಪ್ರಮುಖರಾದ ಚಂದ್ರಶೇಖರ ಶೆಟ್ಟಿ, ಸಂತೋಷ ಕುಮಾರ್ , ಶಂಕರಪೂಜಾರಿ ,ರೋಷನ್ ಪಲ್ಲಿಪಾಡಿ , ಅಜಿತ್ ಪೊಳಲಸುಕೇಶ್ ಚೌಟ,,ಗೋಪಾಲ ಬಂಗೇರ,ಸಂತೋಷ್,ರವಿ, ಚರಣ್ ,ಕಿರಣ್ ,ಲೋಕೆಶ್ ಭರಣಿ ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.








