ಮಂಗಳೂರು: ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಿಆರ್ಝಡ್ ನಿಯಮ ಕಠಿಣಗೊಳಿಸಿದ್ದು, ಇದರಿಂದ ಮೀನುಗಾರರು ಸೇರಿದಂತೆ ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗಿದೆ ಎಂದು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಆರೋಪಿಸಿದರು.

k palemar

ಬಿಜೆಪಿ ಸರಕಾರವಿದ್ದಾಗ ಸಿಆರ್ಝಡ್ಗೆ ಸಂಬಂಧಿಸಿದ ಅನುಮತಿ ಮಂಗಳೂರಿನಲ್ಲೇ ದೊರೆಯುತ್ತಿತ್ತು. ಈಗ ಸಿಆರ್ಝಡ್ ಕ್ಲಿಯರೆನ್ಸ್ ಪಡೆಯಲು ಜನಸಾಮಾನ್ಯರು ಬೆಂಗಳೂರಿಗೆ ಓಡುವಂತೆ ಮಾಡಲಾಗಿದೆ. ಇದರಿಂದ ನೂರಾರು ಕುಟುಂಬಗಳಿಗೆ ತೊಂದರೆಯಾಗಿದೆ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.

ನಾನು ಸಚಿವನಾಗಿದ್ದಾಗ ಹಫ್ತಾ ವಸೂಲಿ ಮಾಡುತ್ತಿದ್ದೆ ಎಂದು ಶಾಸಕ ಮೊಯ್ದೀನ್ ಬಾವ ಆರೋಪಿಸುತ್ತಾರೆ. ಇದು ನಿರಾಧಾರ. ಆದರೆ ದಿಲ್ಲಿಯ ಎಎನ್ಎಸ್ ಕಂಪನಿಯವರು ಎಂಆರ್ಪಿಎಲ್ನಲ್ಲಿ ಪಡೆದುಕೊಂಡ ಗುತ್ತಿಗೆಯಲ್ಲಿ ಶಾಸಕ ಮೊಯ್ದೀನ್ ಬಾವ ಅವರ ಬಾವಾಸ್ ಮೈನ್ಸ್ ಆ?ಯಂಡ್ ಮಿನರಲ್ ಕಂಪನಿ ಉಪ ಗುತ್ತಿಗೆ ಪಡೆದುಕೊಂಡಿದೆ. ಒಬ್ಬ ಶಾಸಕನಾಗಿ ಮೊಯ್ದಿನ್ ಬಾವ ಅಕ್ರಮವಾಗಿ ಗುತ್ತಿಗೆ ಪಡೆದುಕೊಂಡಿದ್ದಾರೆ ಎಂದರು.

ಸುರತ್ಕಲ್ ಸಮೀಪದ ಕೋಡಿಕೆರೆಯಲ್ಲಿ ಕಾಪರ್ೊರೇಟರ್ ಪ್ರತಿಭಾ ಕುಳಾಯಿ ಮತಯಾಚನೆಗೆ ತೆರಳಿದ್ದ ಸಂದರ್ಭ ಅಲ್ಲಿನ ಕೆಲವರು ಅಸಭ್ಯವಾಗಿ ವತರ್ಿಸಿದ್ದಾರೆ ಎನ್ನಲಾದ ಘಟನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಪಾಲೆಮಾರ್, ಅಲ್ಲಿನ ಯಾರೋ ಒಂದಿಬ್ಬರು ಮಾಡಿದ ಕೆಟ್ಟ ಕೆಲಸಕ್ಕೆ ಇಡೀ ಊರಿನವರನ್ನು ಗೂಂಡಾಗಳೆಂದು ಬಿಂಬಿಸುವುದು ತಪ್ಪು. ಕಾಪರ್ೊರೇಟರ್ ಅಲ್ಲಿನ ಜನರಿಗೆ ಅವಮಾನ ಮಾಡಿದ್ದಾರೆ. ಸ್ವತಃ ಪ್ರತಿಭಾ ಅವರೇ ಅಸಭ್ಯವಾಗಿ ವತರ್ಿಸಿದ ಬಗ್ಗೆ ನಮ್ಮಲ್ಲಿ ವಿಡಿಯೊ ದಾಖಲೆಗಳಿವೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್ಸಿಂಹ ನಾಯಕ್, ಮಾಜಿ ಶಾಸಕ ಎನ್.ಯೋಗೀಶ್ ಭಟ್, ಮುಖಂಡರಾದ ಉಮಾನಾಥ ಕೋಟ್ಯಾನ್, ದಿವಾಕರ ಸಾಮನಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *